ಮನೆ ಕನ್‍ಸ್ಟ್ರಕ್ಷನ್ ಉಸ್ತುವಾರಿಗೆ ಬಂದವ ಸ್ನೇಹಿತನ ಪತ್ನಿಯ ಜೊತೆ ಪರಾರಿ

Public TV
1 Min Read

ಬೆಂಗಳೂರು: ಮನೆ ಕಟ್ಟುತ್ತಿದ್ದೇನೆ. ಸ್ವಲ್ಪ ಮನೆ ಉಸ್ತುವಾರಿ ನೋಡಿಕೋ ಎಂದು ಸ್ನೇಹಿತನನ್ನು ಬಿಟ್ಟರೆ ಆ ಮಹಾನುಭಾವ ಸ್ನೇಹಿತನ ಹೆಂಡತಿಯನ್ನೇ ಪಟಾಯಿಸಿಕೊಂಡುಬಿಟ್ಟಿದ್ದಾನೆ.

ಕೋಣನಕುಂಟೆ ನಿವಾಸಿ ದೇವರಾಜ್, ಮನೆ ಸ್ನೇಹಿತ ಮಹೇಶ್‍ಗೆ ಉಸ್ತುವಾರಿ ನೀಡಿದ್ದರು. ಈ ವೇಳೆ ದೇವರಾಜ್ ಪತ್ನಿ ಲತಾ ಜೊತೆ ಸ್ನೇಹ ಬೆಳೆಸಿದ್ದಾನೆ. ಬಳಿಕ ಇವರ ಸಂಬಂಧ ಅನೈತಿಕ ಸಂಬಂಧಕ್ಕೆ ತಿರುಗಿತ್ತು.

ಸ್ವಲ್ಪ ದಿನದ ನಂತರ ಗಂಡ ದೇವರಾಜ್ ಅವರನ್ನು ಬಿಟ್ಟು ಲತಾ ಹೊರ ಹೋಗಿದ್ದಾರೆ. ಬಳಿಕ ಎರಡು ಹೆಣ್ಣು ಮಕ್ಕಳ ತಾಯಿಯಾಗಿರುವ ಲತಾ ಮತ್ತು ದೇವರಾಜ್ ಅವರನ್ನು ಕೂರಿಸಿ ಹಿರಿಯರು ಸಂಧಾನ ಮಾಡಿದ್ದಾರೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಪತ್ನಿಯ ಮೂಗು ಕಚ್ಚಿದ ಪತಿ

ಇದಾದ ಬಳಿಕ ಬಸವನಗುಡಿ ಮಹಿಳಾ ಠಾಣೆಯಲ್ಲಿ ಲತಾ ಅವರು ಪತಿ ಹೊಡೆಯುತ್ತಾನೆ ಎಂದು ದೂರು ನೀಡಿದ್ದಾರೆ. ಇತ್ತ ಪತ್ನಿ ಮತ್ತು ಪ್ರಿಯಕರನ ವಿರುದ್ಧ ದೇವರಾಜ್ ದೂರು ನೀಡಲು ಹೋದರೆ ಕೋಣನಕುಂಟೆ ಪೊಲೀಸರು ದೂರು ಸ್ವೀಕರಿಸಿಲ್ಲ.

ಈ ನಡುವೆ ಮನೆಯನ್ನೇ ಖಾಲಿ ಮಾಡಿಕೊಂಡುವಂತೆ ಧಮ್ಕಿ ಹಾಕಿದ್ದಾರೆ. ಧಮ್ಕಿ ಹಾಕಿ ಸ್ಟೇಷನ್ ನಲ್ಲೇ ಒಂದು ದಿನ ಕೂರಿಸಿದ್ದಾರೆ. ಅಷ್ಟೇ ಅಲ್ಲದೇ ಲಂಚವನ್ನು ಕೋಣನಕುಂಟೆ ಪೊಲೀಸರು ಪಡೆದಿದ್ದಾರೆ ಎಂದು ದೇವರಾಜ್ ಆರೋಪಿಸಿದ್ದಾರೆ.

ಮದುವೆಯಾದ ನಂತರ ನಾನು ಪತ್ನಿ ಹೆಸರಿನಲ್ಲಿ ಆಸ್ತಿ ಮಾಡಿದ್ದೆ. ಆದರೆ ಈಗ ಗೆಳೆಯನ ಜೊತೆ ಸೇರಿ ಮನೆಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಇಬ್ಬರು ಹೆಣ್ಣು ಮಕ್ಕಳನ್ನು ಕೊಡುವಂತೆ ಧಮ್ಕಿ ಹಾಕುತ್ತಿದ್ದಾರೆ. ಈಗ ಕೋರ್ಟ್ ನಿಂದ ಮನೆ ಮಾರಾಟಕ್ಕೆ ತಡೆಯಾಜ್ಞೆ ತಂದಿದ್ದೇನೆ ಎಂದು ದೇವರಾಜ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *