ಕೆಜಿಎಫ್ 2 ನಂತರ ಭಾರತೀಯ ಸಿನಿಮಾ ರಂಗದಲ್ಲಿ ಕೇಳಿ ಬರುತ್ತಿರುವ ಒಂದೇ ಪ್ರಶ್ನೆ, ಯಶ್ ನಟನೆಯ ಮುಂದಿನ ಸಿನಿಮಾ ಯಾವುದು? ನಿರ್ದೇಶಕರು ಯಾರು? ಯಾವ ಕಥೆಯನ್ನು ಅವರು ಒಪ್ಪಲಿದ್ದಾರೆ ಎನ್ನುವುದು. ಹಲವು ಬಾರಿ ಸ್ವತಃ ಯಶ್ ಅವರಿಗೆ ಇಂಥದ್ದೊಂದು ಪ್ರಶ್ನೆಯನ್ನು ಮುಂದಿಟ್ಟಾಗಿ ‘ಕಥೆ ಗಟ್ಟಿಯಾಗುತ್ತಿದೆ. ದೊಡ್ಡದಾಗಿಯೇ ಕನಸು ಕಾಣುತ್ತಿದ್ದೇವೆ. ಸೂಕ್ತ ಸಮಯದಲ್ಲಿ ಹೇಳುತ್ತೇನೆ’ ಎಂದು. ಇದರ ಹೊರತಾಗಿ ಅವರು ಬೇರೆ ಏನೂ ಹೇಳಿಲ್ಲ. ಇದನ್ನೂ ಓದಿ : ಶತ್ರುಘ್ನಾ ಸಿನ್ಹಾ ಮೇಲೆ ಲೈಂಗಿಕ ಹಗರಣ ದಂಧೆ ಆರೋಪ : ನಟಿ ವಿರುದ್ಧ ತಿರುಗಿ ಬಿದ್ದ ಸಿನ್ಹಾ ಕುಟುಂಬ
ಆದರೆ, ಯಶ್ ಮುಂದಿನ ಸಿನಿಮಾ ಕುರಿತಾಗಿ ಈಗಷ್ಟು ಸುದ್ದಿ ಸಿಕ್ಕಿವೆ. ಗಾಂಧಿನಗರದಲ್ಲಿ ಭಾರೀ ಬಜೆಟ್ ಚಿತ್ರಗಳನ್ನು ಮಾಡುತ್ತಿರುವ ಮತ್ತು ಆರ್.ಆರ್.ಆರ್ ಸಿನಿಮಾವನ್ನು ಕರ್ನಾಟಕದಲ್ಲಿ ವಿತರಿಸಿರುವ ಕೆವಿಎನ್ ಪ್ರೊಡಕ್ಷನ್ ಯಶ್ ಅವರ ಸಿನಿಮಾ ಮಾಡಲಿದೆ ಎನ್ನುವ ಸುದ್ದಿ ಕೇಳಿ ಬಂದಿದೆ. ಈಗಾಗಲೇ ಮಾತುಕತೆ ಗೋವಾದಿಂದ ಶುರುವಾಗಿದೆ ಎನ್ನುತ್ತಿವೆ ಮೂಲಗಳು. ಇದನ್ನೂ ಓದಿ : ಸ್ಟಾರ್ ನಟಿ ಪೂಜಾ ಹೆಗಡೆ ನಿದ್ದೆಗೆಡಿಸಿದ ಸಾಲು ಸಾಲು ಸೋಲು
ಮೊನ್ನೆಯಷ್ಟೇ ಯಶ್ ಅವರು ಗೋವಾ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದರು. ಆ ಸಮಯದಲ್ಲಿ ಕೆವಿಎನ್ ಪ್ರೊಡಕ್ಷನ್ ವೆಂಕಟ್ ಕೊನಂಕಿ ಕೂಡ ಹಾಜರಿದ್ದರು. ಹೀಗಾಗಿ ಅವತ್ತು ಒಂದು ಹಂತದ ಮಾತುಕತೆ ಕೂಡ ಮುಗಿದಿದೆ ಎನ್ನುವ ಮಾಹಿತಿ ಸಿಕ್ಕಿದೆ. ಕೆವಿಎನ್ ಪ್ರೊಡಕ್ಷನ್ ಯಶ್ ಅವರ ಮುಂದಿನ ಸಿನಿಮಾವನ್ನು ನಿರ್ಮಾಣ ಮಾಡಿದರೆ ನರ್ತನ್ ಅವರು ನಿರ್ದೇಶನ ಈ ಚಿತ್ರಕ್ಕೆ ಇರಲಿದೆ ಎನ್ನುವುದು ಪ್ರಾರ್ಥಮಿಕ ಮಾಹಿತಿ. ಆದರೆ, ಅಧಿಕೃತವಾಗಿ ಯಶ್ ಅವರಾಗಲಿ ಕೆವಿಎನ್ ಪ್ರೊಡಕ್ಷನ್ ಆಗಲಿ ಈ ಕುರಿತು ಹೇಳಿಕೊಂಡಿಲ್ಲ.