ನವದೆಹಲಿ: ಮಹಿಳೆಯೊಬ್ಬಳು (Woman) ತನ್ನ ತಂದೆಯನ್ನು (Father) ಮತ್ತೆ ಬದುಕಿಸಲು ಮಗುವನ್ನು ಅಪಹರಿಸಿ ನರಬಲಿ ಕೊಡಲು ಸಿದ್ಧವಾದ ಘಟನೆ ನವದೆಹಲಿಯಲ್ಲಿ (NewDelhi) ನಡೆದಿದೆ.
ಶ್ವೇತಾ ಬಂಧಿತ (25) ಆರೋಪಿ. ದೆಹಲಿಯ ಗರ್ಹಿ ಪ್ರದೇಶದಿಂದ 2 ತಿಂಗಳ ಮಗು ನಾಪತ್ತೆ ಆಗಿತ್ತು. ಈ ಹಿನ್ನೆಲೆಯಲ್ಲಿ ಮಗುವಿನ (Baby) ಪೋಷಕರು ಅಲ್ಲಿನ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ವೇಳೆ ಮಗುವಿನ ತಾಯಿಯನ್ನು ವಿಚಾರಣೆ ನಡೆಸಿದ್ದಾಗ ಆರೋಪಿ ಮಹಿಳೆಯು ಖಾಸಗಿ ಆಸ್ಪತ್ರೆಯಲ್ಲಿ ಭೇಟಿಯಾಗಿದ್ದರು. ಆಕೆ ಎನ್ಜಿಒ ಸದಸ್ಯೆ ಎಂದು ಪರಿಚಯ ಮಾಡಿಕೊಂಡು, ನವಜಾತ ಶಿಶುವಿನ ಬೆಳವಣಿಗೆಯನ್ನು ಪರೀಕ್ಷಿಸುವ ನೆಪದಲ್ಲಿ ಆಕೆ ಅವರನ್ನು ಹಿಂಬಾಲಿಸಿರುವ ವಿಷಯವನ್ನು ಪೊಲೀಸರು ತಿಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಸಿಟಿವಿಯ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರಿಗೆ ಮಗುವನ್ನು ಆಕೆಯೇ ಅಪಹರಿಸಿರುವ ವಿಷಯ ತಿಳಿದಿದೆ. ಇದನ್ನೂ ಓದಿ: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ – ಶಿಕ್ಷಕನಿಗೆ ಬಿತ್ತು ಧರ್ಮದೇಟು
ಈ ಹಿನ್ನೆಲೆಯಲ್ಲಿ ಪೊಲೀಸರು ಆಕೆಯನ್ನು ಬಂಧಿಸಲು ಶ್ವೇತಾಳ ಮನೆಗೆ ತೆರಳಿದ್ದಾರೆ. ಅಲ್ಲಿ ಶ್ವೇತಾ ಮಗುವನ್ನು ಬಲಿಕೊಡಲು ಸಿದ್ಧಳಾಗಿದ್ದಳು. ಅಷ್ಟೇ ಅಲ್ಲದೇ ಮಗುವನ್ನು ಬಲಿ ಕೊಡುವುದರಿಂದ ತನ್ನ ಮೃತ ತಂದೆ ಬದುಕಿ ಬರುತ್ತಾರೆ ಎಂಬ ನಂಬಿಕೆಯಲ್ಲಿದ್ದಳು. ಆದರೆ ಅಷ್ಟರಲ್ಲಿ ಶ್ವೇತಾಳನ್ನು ಬಂಧಿಸಲಾಗಿದ್ದು, ಪೊಲೀಸರು ಮಗುವನ್ನು ರಕ್ಷಿಸಿದ್ದಾರೆ. ಇದನ್ನೂ ಓದಿ: ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ರಥ ಬೀದಿಯಲ್ಲಿ ಅರೆಬರೆ ವಸ್ತ್ರ ಧರಿಸಿದವರ ಸಂಚಾರಕ್ಕೆ ನಿಷೇಧ!