ರಾಯಚೂರು: ಎಸಿಬಿ ದಾಳಿಗೆ ಒಳಗಾಗುವವರು ಶುದ್ಧರಾಗಿದ್ರೆ ಏಕೆ ಹೆದರಬೇಕು ಎಂದು ಸಚಿವ ಬಿ.ಸಿ.ನಾಗೇಶ್ ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟರು.
ಶಾಸಕ ಜಮೀರ್ ಅಹ್ಮದ್ ಮನೆ ಮೇಲೆ ಎಸಿಬಿ ದಾಳಿ ವೇಳೆ ಗಲಾಟೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಮ್ಮ ನಾಯಕರ ಮೇಲೆಯೂ ದಾಳಿಗಳು ನಡೆದಿದೆ. ನಮ್ಮ ವಿಚಾರಣೆ ಬಂದಾಗ ಕಲ್ಲು ಹೊಡೆಯಿರಿ, ಬಂದ್ ಮಾಡಿ ಅಂತ ಹೇಳಿಲ್ಲ. ಇಷ್ಟು ವರ್ಷ ಆಳ್ವಿಕೆ ಮಾಡಿದ ಕಾಂಗ್ರೆಸ್ ಪಕ್ಷ ದೇಶವನ್ನ ಈ ಸ್ಥಿತಿಗೆ ತಂದಿದೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಪಾಪುವಿನಂತೆ ರಾಹುಲ್ ಗಾಂಧಿಯನ್ನು ಮುದ್ದು ಮಾಡಿದ ಅಜ್ಜಿ
ಸಂವಿಧಾನದ ಪ್ರಕಾರ ರಚನೆಯಾದ ಸಂಸ್ಥೆಗಳಿಗೆ ತನ್ನದೇ ಆದ ಕೆಲಸಗಳು ನೀಡಿದೆ. ಎಸಿಬಿ, ಇಡಿ ರಚನೆ ಮಾಡಿದ್ದು, ಬಿಜೆಪಿ ಸರ್ಕಾರದಲ್ಲಿ ಅಲ್ಲ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿಯೂ ಅಲ್ಲ. ವಿಚಾರಣೆಗಳು ನಡೆಸಿದ್ದು, ಬಿಜೆಪಿ ಬಂದ ಮೇಲೆಯೂ ಅಲ್ಲ. ಅನೇಕ ವರ್ಷಗಳಿಂದ ವಿಚಾರಗಳು ನಡೆದಿವೆ. ಅನೇಕ ನಾಯಕರು ಇಡಿ ಮತ್ತು ಎಸಿಬಿ ವಿಚಾರಣೆಗಳಿಗೆ ಹಾಜರ್ ಆಗುತ್ತಿದ್ದಾರೆ. ಎಸಿಬಿ ರೆಡ್ ಆಗಿದ್ದಾಗ ಅವರು ಶುದ್ಧರಾಗಿದ್ರೆ ಏಕೆ ಹೆದರಬೇಕು ಎಂದು ಸವಾಲು ಹಾಕಿದರು.