ವಿಜಯಪುರ: ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳ ಆಯಸ್ಸು ಹೆಚ್ಚಾಗಲೆಂದು ಇಲ್ಲಿನ ಕೆಲವು ಮುಸ್ಲಿಂ ಯುವಕರು ಅಲ್ಲಾನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ನಗರದ ಮುರ್ತುಜ್ ಖಾದ್ರಿ ದರ್ಗಾದಲ್ಲಿ ಒಂಬತ್ತು ಜನ ಯುವಕರು ನಡೆದಾಡುವ ದೇವರು ಬೇಗ ಚೇತರಿಸಿಕೊಳ್ಳಲಿ ಎಂದು ಅಲ್ಲಾನಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ದರ್ಗಾದಲ್ಲಿ ತೆಂಗಿನಕಾಯಿ ಒಡೆಯುವ ಪದ್ಧತಿ ವಿರಳ. ಆದರೆ ಈ ಯುವಕರು ತೆಂಗಿನಕಾಯಿ ಒಡೆದು, ಊದು ಬತ್ತಿ ಹಚ್ಚಿ ಅಲ್ಲಾನಿಗೆ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಶ್ರೀಗಳು ಸರ್ವ ಧರ್ಮಗಳ ಗುರುಗಳು. ಸಿದ್ದಗಂಗಾ ಮಠದಲ್ಲಿ ನಿತ್ಯವೂ ಶಿಕ್ಷಣ ದಾಸೋಹ, ಅನ್ನ ದಾಸೋಹ ನಡೆಯುತ್ತದೆ. ಇದು ಯಾವುದೇ ಜಾತಿ ಬೇಧವಿಲ್ಲದೆ ನಡೆಯುತ್ತದೆ. ಶಿಕ್ಷಣ ಹಾಗೂ ಅನ್ನ ದಾಸೋಹವನ್ನು ಸರ್ವ ಜನಾಂಗದವರಿಗೆ ಒದಗಿಸಿರುವ ಶ್ರೀಗಳು ಜಗತ್ತಿಗೆ ದೇವರಾಗಿದ್ದಾರೆ. ಅವರಿಗೆ ಆಯಸ್ಸು ಹಾಗೂ ಆರೋಗ್ಯ ದೇವರು ನೀಡಲೆಂದು ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದು ಯುವಕರು ಹೇಳುತ್ತಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv