ಚಿಕ್ಕೋಡಿ: ಯು.ಟಿ ಖಾದರ್ (U.T Khader) ಅವರೇ ನಮ್ಮ ಬಳಿ ಬಂದು ಎಸ್ಡಿಪಿಐ (SDPI), ಪಿಎಫ್ಐ (PFI) ಸಂಘಟನೆಯನ್ನು ಬ್ಯಾನ್ ಮಾಡುವಂತೆ ಕಣ್ಣೀರು ಹಾಕಿದ್ದರು. ಇದಕ್ಕೆ ನನ್ನ ಬಳಿ ಸಾಕ್ಷಿ ಆಧಾರಗಳಿವೆ ಎಂದು ಎಲ್ಲಾ ಸಂಘಟನೆಗಳು ಬ್ಯಾನ್ ಅಗಬೇಕು ಎಂಬ ಯು.ಟಿ ಖಾದರ್ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalinkumar Kateel) ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್ಡಿಪಿಐ ಹಾಗೂ ಪಿಎಫ್ಐ ಕಾರ್ಯಕರ್ತರು ಯು.ಟಿ ಖಾದರ್ ಅವರನ್ನೇ ಹತ್ಯೆ ಮಾಡಲು ಮುಂದಾಗಿದ್ದರು. ಧಾರ್ಮಿಕ ಸಂಘಟನೆಯ ಹೆಸರಲ್ಲಿ ನಾವು ಯಾರನ್ನೂ ವಿರೋಧ ಮಾಡಿಲ್ಲ. ಕಳೆದ 8 ವರ್ಷಗಳ ಅಧ್ಯಯನದ ನಂತರ ಈ ಕ್ರಮ ಕೈಗೊಂಡಿದ್ದೇವೆ. ಪ್ರವೀಣ್ ಹತ್ಯೆ, ಪ್ರಶಾಂತ್ ಹತ್ಯೆ, ಮೈಸೂರಿನ ಹತ್ಯೆಗಳು, ಚೂರಿ ಇರಿತ, ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣಗಳು ಎಲ್ಲಾ ರೀತಿಯಲ್ಲಿ ತನಿಖೆ ಮಾಡಲಾಗಿದೆ. ತನಿಖಾ ಸಂಸ್ಥೆಗಳು ನೀಡಿದ ವರದಿ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: PFI ನಿಷೇಧವನ್ನು ಸ್ವಾಗತಿಸಿದ ಕರ್ನಾಟಕ ಕಾಂಗ್ರೆಸ್
ಭಾರತ ಜೋಡೋ (Bharat Jodo) ಯಾತ್ರೆಯಲ್ಲಿ ಪೇಸಿಎಂ (PayCM) ಪೋಸ್ಟರ್ ಪ್ರದರ್ಶನ ವಿಚಾರವಾಗಿ ಮಾತನಾಡಿ, ಈ ರಾಜ್ಯದಲ್ಲಿ ಪೇಮೆಂಟ್ ಸಿ.ಎಂ ಯಾರಾದ್ರೂ ಆಗಿದ್ರೆ ಅದು ಸಿದ್ದರಾಮಣ್ಣ (Siddaramaiah). ಖರ್ಗೆ ಇದ್ದರು, ಪರಮೇಶ್ವರ್, ಡಿಕೆಶಿ ಇದ್ದರೂ ಸಹ ನೇರವಾಗಿ ಸಿದ್ದು ಸಿ.ಎಂ ಆದರು. ನೇರವಾಗಿ ಪೇಮೆಂಟ್ ಮಾಡಿಯೇ ಸಿದ್ದರಾಮಯ್ಯ ಸಿ.ಎಂ ಆಗಿದ್ದು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: PFI ಮಾತ್ರ ಯಾಕೆ? RSS ನಿಷೇಧವಾಗಲಿ: ಕಾಂಗ್ರೆಸ್ ಸಂಸದ ಕೋಡಿಕುನ್ನಿಲ್ ಸುರೇಶ್ ಆಗ್ರಹ