ಚೆನ್ನೈ: ಗೋಡೆ ಕೊರೆದು ದೊಡ್ಡ ರಂಧ್ರದ ಮೂಲಕ ಮದ್ಯದಂಗಡಿಗೆ ನುಗ್ಗಿ ಅಲ್ಲಿಯೇ ಮದ್ಯ ಸೇವಿಸಿ ಮೈಮರೆತಿದ್ದ ಇಬ್ಬರು ಕಳ್ಳರನ್ನು ತಮಿಳುನಾಡಿನ ತಿರುವಳ್ಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ
ಬಂಧಿತ ಆರೋಪಿಗಳನ್ನು ಪಳ್ಳಿಕರಣೈ ನಿವಾಸಿ ಸತೀಶ್ ಮತ್ತು ವಿಲುಪುರಂ ಮೂಲದ ಮುನಿಯನ್ ಎಂದು ಗುರುತಿಸಲಾಗಿದೆ. ಇದೀಗ ಇಬ್ಬರ ಬಳಿ ಇದ್ದ 14,000 ರೂಪಾಯಿ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಶಾಲಾ ಪಠ್ಯದಲ್ಲಿ ಲೈಂಗಿಕ ಶಿಕ್ಷಣ ಅಳವಡಿಸಲು ತಮಿಳು ನಾಡು ಸರಕಾರಕ್ಕೆ ಮನವಿ ಮಾಡಿದ ನಿರ್ದೇಶಕ ವೆಟ್ರಿಮಾರನ್
ಕವರಾಯಪೇಟೈಯಲ್ಲಿರುವ ಸರ್ಕಾರಿ ಟಾಸ್ಮಾಕ್ ಮದ್ಯದ ಅಂಗಡಿಯನ್ನು ವ್ಯಾಪಾರ ಮುಗಿದ ನಂತರ ಮುಚ್ಚಲಾಗಿತ್ತು. ಈ ವೇಳೆ ಇಬ್ಬರು ಕಳ್ಳರು ಅಂಗಡಿಯ ಗೋಡೆ ಕೊರೆದು ದೊಡ್ಡ ರಂಧ್ರ ಮಾಡಿ ಈ ಮೂಲಕ ಅಂಗಡಿ ಒಳಗೆ ನುಗ್ಗಿದ್ದಾರೆ. ನಂತರ ಅಂಗಡಿಯಲ್ಲಿದ್ದ ಮದ್ಯವನ್ನು ಕುಡಿಯಲು ಪ್ರಾರಂಭಿಸಿ ತಾವು ಎಲ್ಲಿದ್ದೇವೆ ಎಂಬ ಸಮಯ ಪ್ರಜ್ಞೆಯನ್ನು ಕಳೆದುಕೊಂಡಿದ್ದರು. ಇದನ್ನೂ ಓದಿ: ಹೆಚ್ಚು ಹುಡುಗರೊಂದಿಗೆ ಮಾತಾಡ್ತಾಳೆ ಅಂತ ಮಗಳನ್ನೇ ಕೊಂದ ಪೋಷಕರು
ನಂತರ ರಾತ್ರಿ ವೇಳೆ ಗಸ್ತು ನಡೆಸುತ್ತಿದ್ದ ಪೊಲೀಸರಿಗೆ ಅಂಗಡಿ ಒಳಗಿನಿಂದ ಶಬ್ದ ಕೇಳಿಬಂದಿದ್ದು, ಪರಿಶೀಲನೆ ನಡೆಸಲು ಮುಂದಾದಾಗ ಗೋಡೆಯಲ್ಲಿ ದೊಡ್ಡ ರಂಧ್ರ ಕೊರೆದಿರುವುದು ಮತ್ತು ಅಂಗಡಿಯೊಳಗೆ ಮದ್ಯದ ಬಾಟಲಿ ಹಿಡಿದುಕೊಂಡು ಕುಡಿಯುತ್ತಿರುವ ಇಬ್ಬರು ವ್ಯಕ್ತಿಯನ್ನು ನೋಡಿ ಪೊಲೀಸರು ಶಾಕ್ ಆಗಿದ್ದಾರೆ. ಬಳಿಕ ವಿಚಾರಣೆ ವೇಳೆ ಕಳ್ಳರು ಮದ್ಯದ ಬಾಟಲಿಯನ್ನು ಕದಿಯುವ ಉದ್ದೇಶದಿಂದ ಅಂಗಡಿಗೆ ನುಗ್ಗಿರುವುದಾಗಿ ತಿಳಿಸಿದ್ದಾರೆ.