ಕಿಚ್ಚನ ವಾರದ ಕ್ಲಾಸ್ ನಂತರ ಬಿಗ್ ಬಾಸ್ ಮನೆ ತಣ್ಣಗೆ ಆದಂತೆ ಕಾಣುತ್ತಿದೆ. ಇಂದು ದೊಡ್ಮನೆಯಲ್ಲೂ 75ನೇ ಸ್ವಾಂತಂತ್ರ್ಯ ಅಮೃತ ದಿನಾಚರಣೆಯನ್ನು ಬಲು ಸಡಗರದಿಂದ ಮನೆ ಸದಸ್ಯರು ಆಚರಿಸಿದ್ದಾರೆ. ಬಣ್ಣ ಬಣ್ಣದ ಉಡುಗೆಗಳನ್ನು ತೊಟ್ಟು ಬಂದಿದ್ದ ಸ್ಪರ್ಧಿಗಳು ಭಾರತದ ಧ್ವಜ ಮತ್ತು ಭಾರತಾಂಬೆಗೆ ನಮಿಸಿದರು. ಸಹಿ ಹಂಚಿಕೊಂಡು ಸಂಭ್ರಮಿಸಿದರು. ಆನಂತರ ತಮ್ಮ ಪಾಡಿಗೆ ತಾವು ಇಷ್ಟ ಬಂದಂತೆ ಚರ್ಚೆಗೆ ಕೂತರು.
ಇತ್ತೀಚಿನ ದಿನಗಳಲ್ಲಿ ಬಿಗ್ ಬಾಸ್ ಮನೆಯಲ್ಲಿ ಫ್ಲರ್ಟ್ ಕಾರಣಕ್ಕಾಗಿ ರಾಕೇಶ್ ಅಡಿಗ ಸಖತ್ ಸುದ್ದಿ ಮಾಡುತ್ತಿದ್ದಾರೆ. ಒಂದು ಕಡೆ ಸೋನು ಶ್ರೀನಿವಾಸ ಗೌಡ ಮತ್ತೊಂದು ಕಡೆ ಸ್ಪೂರ್ತಿ ಗೌಡ. ಈ ತ್ರಿಕೋನ ಲವ್ ಕಹಾನಿ ಭಾರೀ ಸದ್ದು ಮಾಡುತ್ತಿದೆ. ಅದರಲ್ಲೂ ಸ್ಪೂರ್ತಿ ಗೌಡ ಮತ್ತು ರಾಕೇಶ್ ಯಾವಾಗಲೂ ಅಂಟಿಕೊಂಡೇ ಓಡಾಡುವುದರಿಂದ, ಬಿಗ್ ಬಾಸ್ ಮನೆಯ ಪ್ರಣಯ ಪಕ್ಷಿಗಳು ಎಂದೇ ಬಿಂಬಿಸಲಾಗುತ್ತಿದೆ. ಇದನ್ನೂ ಓದಿ:ಬಾರ್ಸಿಲೋನದಲ್ಲಿ ನಯನತಾರಾ- ವಿಘ್ನೇಶ್ ಶಿವನ್ ದಂಪತಿ
ರಾಕೇಶ್ ಎಲ್ಲಿರುತ್ತಾನೋ, ಅಲ್ಲಿ ಸ್ಪೂರ್ತಿ ಗೌಡ ಕಾಣಿಸಿಕೊಳ್ಳುತ್ತಾರೆ. ಇಬ್ಬರ ಮಧ್ಯದ ಸಂಭಾಷಣೆಗಳು ಕೂಡ ಪ್ರೇಮಿಗಳ ಕಲರವದಂತೆಯೇ ಇರುತ್ತವೆ. ರಾಕೇಶ್ ಗಲ್ಲ ಮುಟ್ಟಿ ಮುದ್ದಿಸುವಂತೆ ಸ್ಪೂರ್ತಿ ಕೂಡ ಮಾತುಗಳನ್ನು ಆಡುತ್ತಾರೆ. ಈ ಜೋಡಿಯ ಬಗ್ಗೆ ಮನೆಯವರು ಈಗೊಂದು ನಿರ್ಧಾರಕ್ಕೆ ಬಂದಂತೆ ಕಾಣುತ್ತಿದೆ. ಹಾಗಾಗಿಯೇ ಇಡೀ ಮನೆಯ ಸದಸ್ಯರ ಕಣ್ಣು ಇಬ್ಬರ ಮೇಲೆ ನೆಟ್ಟಿದೆ. ಈ ಜೋಡಿಯೂ ಕೂಡ ಅನುಮಾನ ಬರುವಂತೆಯೇ ಮನೆಯಲ್ಲಿ ವರ್ತಿಸುತ್ತಿದೆ.