ನೀರು ಪೋಲಾಗುತ್ತಿರುವ ಪೋಟೋ ಕಳಿಸಿ ಬಹುಮಾನ ಗೆಲ್ಲಿ- ಚಿಕ್ಕಬಳ್ಳಾಪುರ ಜಿಲ್ಲಾಡಳಿತದಿಂದ ಆಫರ್ !

1 Min Read

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತೀವ್ರ ಬರ ಹಿನ್ನಲೆ, ಹನಿ ಹನಿ ನೀರು ಪೋಲಾಗದಂತೆ ತಡೆದು ಜೀವಜಲ ಸಂರಕ್ಷಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನಾಗಾಂಭಿಕಾ ದೇವಿ ಅವರು ಹೊಸ ಪ್ಲಾನ್ ಮಾಡುವಂತೆ ಡಿಸಿ ಮತ್ತು ಸಿಇಓ ಗೆ ಸೂಚನೆ ಕೊಟ್ಟಿದ್ದಾರೆ.

ಜಿಲ್ಲೆಯಲ್ಲಿ ಸಾರ್ವಜನಿಕರು ನೀರು ಪೋಲಾಗುತ್ತಿರುವ ಪೋಟೋ ತೆಗೆದು ಕಳಿಸಿದ್ರೇ ಅವರಿಗೆ ಸೂಕ್ತ ಬಹುಮಾನ ನೀಡುವಂತೆ ಸಲಹೆ ನೀಡಿದ್ದಾರೆ. ಈ ಬಗ್ಗೆ ವಾಟ್ಸಾಪ್ ನಂಬರ್ ಸಾರ್ವಜನಿಕರು ನೀರು ಪೋಲಾಗುತ್ತಿರುವ ಅಥವಾ ಅದನ್ನ ತಡೆಯುವ ಪೋಟೋ ಕಳಿಸಿದ್ರೇ ಜಿಲ್ಲಾಡಳಿತದ ವತಿಯಿಂದ ಸೂಕ್ತ ಬಹುಮಾನ ನೀಡಲಾಗುವುದು ಎಂದು ನಾಗಾಂಭಿಕಾ ಹೇಳಿದ್ದಾರೆ.

ನಾಗಾಂಭಿಕಾ ಅವರು ಡಿಸಿ ಮತ್ತು ಸಿಇಒ ಅವರಿಗೆ ವಾಟ್ಸಪ್ ನಂಬರ್ ಕ್ರಿಯೇಟ್ ಮಾಡಿ ಸಾರ್ವಜನಿಕರಿಗೆ ನೀಡುವಂತೆ ಸೂಚನೆ ನೀಡಿದ್ದಾರೆ. ಇನ್ನೂ ಬರ ಪರಿಶೀಲನಾ ಸಭೆಯಲ್ಲಿ ಸಮರ್ಪಕ ಮಾಹಿತಿ ನೀಡದ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ನಾಗಾಂಭಿಕಾ ಅಸಮಾಧಾನ ವ್ಯಕ್ತಪಡಿಸಿದ್ರು.

 

Share This Article
Exit mobile version