ಮೈಸೂರಿನಲ್ಲಿ ನಡೆದ ಹೈ ಡ್ರಾಮಾ ನಂತರ ತೆಲುಗು ನಟ ನರೇಶ್ ಮತ್ತು ರಮ್ಯಾ ರಘುಪತಿ (Ramya Raghupathi) ಪ್ರಕರಣ ತಣ್ಣಗಾಗಿತ್ತು. ಕೋರ್ಟ್ ನಲ್ಲಿ ಈ ಪ್ರಕರಣವನ್ನು ನೋಡಿಕೊಳ್ಳುವುದಾಗಿ ನರೇಶ್ ಹೇಳಿದ್ದರು. ಇತ್ತ ಕಡೆ ರಮ್ಯಾ ಅವರ ತಾಯಿಗೆ ಹುಷಾರಿಲ್ಲದ ಕಾರಣ ಅವರ ಮೌನವಹಿಸಿದ್ದರು. ಇದೀಗ ಮತ್ತೆ ರಮ್ಯಾ ಅವರು ನರೇಶ್ ಅವರ ಮನೆಗೆ ಹೋಗಿದ್ದಾರೆ, ನರೇಶ್ ಜೊತೆಯೇ ವಾಸಿಸಲು ನಿರ್ಧಾರ ತಗೆದುಕೊಂಡಿದ್ದಾರೆ ಎನ್ನುವ ಸುದ್ದಿ ಇತ್ತು. ಅದಕ್ಕೆ ನರೇಶ್ ಸ್ಪಷ್ಟನೆ ನೀಡಿದ್ದಾರೆ.
ನನ್ನ ಮನೆಯಲ್ಲಿ ರಮ್ಯಾ ಇದ್ದಾರೆ, ಇಲ್ಲಿಗೆ ಬಂದಿದ್ದಾರೆ ಎನ್ನುವುದು ಸುಳ್ಳು. ಅದು ಸಾಧ್ಯವಾಗದೇ ಇರುವ ಕೆಲಸ. ಯಾರೋ ಮಾನಸಿಕ ಸರಿ ಇಲ್ಲದ ವ್ಯಕ್ತಿಯೊಬ್ಬ ಈ ರೀತಿ ಸುಳ್ಳು ಸುದ್ದಿಯನ್ನು ಹರಡುತ್ತಿದ್ದಾನೆ. ರಮ್ಯಾ ಮತ್ತು ನಾನು ಎಂದಿಗೂ ಮತ್ತೆ ಒಂದಾಗಲು ಸಾಧ್ಯವೇ ಇಲ್ಲ. ಡಿವೋರ್ಸ್ ಕೇಸ್ ಕೋರ್ಟಿನಲ್ಲಿದೆ. ಕೋರ್ಟ್ ತೀರ್ಪಿಗಾಗಿ ನಾನು ಕಾಯುತ್ತಿದ್ದೇನೆ. ಯಾರೂ ವಂದತಿಗಳನ್ನು ಯಾರೂ ನಂಬಬಾರದು ಎಂದು ನರೇಶ್ (Naresh) ಸ್ಪಷ್ಟನೆ ಕೊಟ್ಟಿದ್ದಾರೆ. ಇದನ್ನೂ ಓದಿ:ಹಿಂದಿ ಕಿರುತೆರೆಯಲ್ಲಿ ಬರಲಿದೆ `ಕೆಜಿಎಫ್ 2′ ಚಿತ್ರ: ರಾಕಿಭಾಯ್ ಎಂಟ್ರಿಗೆ ಕೌಂಟ್ ಡೌನ್
ಅಲ್ಲದೇ, ರಮ್ಯಾ ಅವರು ಯಾವುದೇ ರೀತಿಯಲ್ಲೂ ತಮ್ಮನ್ನು ಸಂಪರ್ಕಿಸಿಲ್ಲ ಎನ್ನುವುದನ್ನು ಇದೇ ಸಂದರ್ಭದಲ್ಲಿ ಅವರು ಸ್ಪಷ್ಟ ಪಡಿಸಿದ್ದು, ಡಿವೋರ್ಸ್ (Divorce) ತೀರ್ಪಿಗಾಗಿ ತಾವು ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ಈ ರೀತಿ ರೂಮರ್ (Rumor) ಹರಡಿಸುವವರ ವಿರುದ್ಧವೂ ನರೇಶ್ ಹರಿಹಾಯ್ದಿದ್ದಾರೆ. ಇನ್ಮುಂದೆ ಇಂತಹ ಸುದ್ದಿಗಳು ಬಂದಾಗ ನಂಬಬೇಡಿ ಎಂದೂ ಅವರು ಹೇಳಿದ್ದಾರೆ.