Cinema
ಸೂಪರ್ ಸ್ಟಾರ್ ರಜನಿಕಾಂತ್ ಆಸ್ಪತ್ರೆಗೆ ದಾಖಲು

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರು ಅನಾರೋಗ್ಯದಿಂದ ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಕ್ತದೊತ್ತಡದ ತೀವ್ರ ಏರಿಳಿತದ ಸಮಸ್ಯೆಯಿಂದಾಗಿ ರಜನಿಕಾಂತ್ ಇಂದು ಬೆಳಗ್ಗೆ ಹೈದರಾಬಾದ್ನ ಅಪೋಲೋ ಆಸ್ಪತ್ರೆಗೆ ದಾಖಲು ಆಗಿದ್ದಾರೆ. ರಜನಿಕಾಂತ್ ಅವರು ಚೆನ್ನೈ ಹೊರ ವಲಯದ ಫಾರ್ಮ್ಹೌಸ್ನಲ್ಲಿ ಪ್ರತ್ಯೇಕವಾಗಿದ್ದರು.
Rajinikanth admitted to hospital this morning after showing severe fluctuation in blood pressure. He’ll be investigated & monitored closely till his bp settles down before being discharged. He doesn’t have any other symptoms & is hemodynamically stable: Apollo Hospital, Hyderabad pic.twitter.com/lQYPErCFRk
— ANI (@ANI) December 25, 2020
ರಜನಿಕಾಂತ್ ಹೈದ್ರಾಬಾದ್ನಲ್ಲಿ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಆದರೆ ಅಲ್ಲಿ ನಾಲ್ವರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿರುವ ಕಾರಣ ಚಿತ್ರೀಕರಣವನ್ನು ಸ್ಥಗಿತಗೊಳಿಸಿದ್ದರು. ರಜನಿಕಾತ್ ಅವರ ಕೊರೊನಾ ಪರೀಕ್ಷೆ ವರದಿ ನೆಗೆಟೆವ್ ಎಂದು ಬಂದಿತ್ತು.
ಮುಂದಿನ ವರ್ಷ ತಮಿಳುನಾಡಿನಲ್ಲಿ ಚುನಾವಣೆ ನಡೆಯಲಿದ್ದು, ರಜನಿಕಾಂತ್ ರಾಜಕೀಯ ಪಕ್ಷ ಸಹ ಸ್ಪರ್ಧಿಸಲಿದೆ. ಈ ಹಿನ್ನಲೆಯಲ್ಲಿ ಈಗಾಗಲೇ ಒಪ್ಪಿಕೊಂಡಿರುವ ಅಣ್ಣಾತ್ತೆ ಚಿತ್ರದ ಚಿತ್ರೀಕರಣವನ್ನು ಬೇಗ ಮುಗಿಸುವ ಯೋಚನೆಯಲ್ಲಿದ್ದರು.
