ಬೆಂಗಳೂರು: ಪ್ರಿಯಾಂಕಾ ಗಾಂಧಿಯವರನ್ನು ರಾಜ್ಯದಿಂದ ರಾಜ್ಯ ಸಭೆಗೆ ಸ್ಪರ್ಧಿಸಲು ಒಪ್ಪಿಸಿ ಎಂದು ರಾಜ್ಯ ಕಾಂಗ್ರೆಸ್ ನಾಯಕರುಗಳು ರಾಹುಲ್ ಗಾಂಧಿಗೆ ಮನವಿ ಮಾಡಿದ್ದಾರೆ.
ರಾಜಸ್ಥಾನದ ಉದಯಪುರದಲ್ಲಿ ರಾಹುಲ್ ಗಾಂಧಿ ಜೊತೆ ಇದೇ ವಿಚಾರ ಪ್ರಸ್ತಾಪಿಸಿರುವ ರಾಜ್ಯ ಕೈ ನಾಯಕರುಗಳು ಪ್ರಿಯಾಂಕಾ ಗಾಂಧಿ ಸ್ಪರ್ಧೆಯಿಂದ ಏನೆಲ್ಲಾ ಉಪಯೋಗ ಎನ್ನುವುದನ್ನು ವಿವರಿಸಿದ್ದಾರೆ.
* ಪ್ರಿಯಾಂಕಾ ಗಾಂಧಿ ಸ್ಪರ್ಧೆಯಿಂದ ರಾಜ್ಯದಲ್ಲಿ ಪಕ್ಷಕ್ಕೆ ಹೇಗೆ ಸಹಾಯವಾಗಲಿದೆ.
* 2023 ರ ಚುನಾವಣೆ ಗೆಲುವಿಗೆ ಹೇಗೆ ಸಹಕಾರಿಯಾಗಲಿದೆ.
* ಪಕ್ಷ ಸಂಘಟನೆಗೆ ಪ್ರಿಯಾಂಕ ಗಾಂಧಿಯವರ ನೆರವನ್ನು ಪಕ್ಷ ಹೇಗೆ ಪಡೆಯಬಹುದು.
* ಇದರಿಂದ ದಕ್ಷಿಣ ಭಾರತದ ಇತರೆ ರಾಜ್ಯಗಳಲ್ಲು ಪಕ್ಷ ಸಂಘಟನೆಗೆ ಹೇಗೆ ನೆರವಾಗಲಿದೆ.
ಎಲ್ಲವನ್ನೂ ಎಳೆ, ಎಳೆಯಾಗಿ ಬಿಡಿಸಿಟ್ಟಿದ್ದಾರೆ ಕೈ ನಾಯಕರುಗಳು. ಪ್ರಿಯಾಂಕಾ ಗಾಂಧಿ ಮನವೊಲಿಸಿ ರಾಜ್ಯದಿಂದ ಸ್ಪರ್ಧೆ ಮಾಡುವಂತೆ ಮಾಡಿ ಎಂದು ರಾಹುಲ್ ಗಾಂಧಿ ಬಳಿ ಮನವಿ ಮಾಡಿದ್ದಾರೆ. ನೀವು ಈ ವಿಚಾರವಾಗಿ ಪ್ರಿಯಾಂಕಾ ಗಾಂಧಿ ಅವರನ್ನು ಕೇಳಿ ನಾನು ಅವರಿಗೆ ಹೇಳುತ್ತೇನೆ ಎಂದು ರಾಹುಲ್ ಗಾಂಧಿ ಅವರು ತಿಳಿಸಿದ್ದಾರೆ. ಅಂತಿಮ ತೀರ್ಮಾನ ಅವರದೇ ಅವರ ಸ್ಪರ್ಧೆಗೆ ನನ್ನದೇನು ತಕರಾರಿಲ್ಲ ಎಂದಿದ್ದಾರೆ ಎನ್ನಲಾಗುತ್ತಿದೆ.