ಚಿಕ್ಕಬಳ್ಳಾಪುರ: ಬಿಸ್ಲೆರಿ ಬಾಟಲಿಗಿಂತ ಶುದ್ಧವಾದ ಹಾಗೂ ಧರ್ಮಸ್ಥಳ ಮಂಜುನಾಥನ ಪಾದ ತೊಳೆಯುವಂತಹ ಪರಿಶುದ್ಧ ನೀರು ಮನೆ ಬಾಗಿಲಿಗೆ ಬರಲಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವೀರಪ್ಪಮೊಯ್ಲಿ ಹೇಳಿದ್ದಾರೆ.
ಎತ್ತಿನಹೊಳೆ ಯೋಜನೆಗೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಸದಾನಂದಗೌಡ, ಜಗದೀಶ್ ಶೆಟ್ಟರ್ ಬಳಿ ಕೇಳಿಕೊಂಡರೂ ನಯಾಪೈಸೆ ಬಿಡುಗಡೆ ಮಾಡಲಿಲ್ಲ. ಆದರೆ ಪುಣ್ಯಾತ್ಮ ಸಿದ್ದರಾಮಯ್ಯ 14 ಸಾವಿರ ಕೋಟಿ ರೂಪಾಯಿ ಹಣ ಮಂಜೂರು ಮಾಡಿದರು. ಹೀಗಾಗಿ ಅಂದಿನಿಂದ ಹಗಲು ರಾತ್ರಿ ಎನ್ನದೆ ಎತ್ತಿನಹೊಳೆ ಯೋಜನೆಯ ಕಾಮಗಾರಿ ಭರದಿಂದ ಸಾಗಿದೆ ಎಂದರು.
ಕೇವಲ 80 ಕಿ.ಮೀ ನಷ್ಟು ಕೆಲಸ ಮಾತ್ರ ಬಾಕಿ ಇದೆ. ಇನ್ನೂ ಒಂದೆರೆಡು ವರ್ಷದಲ್ಲಿ ಬಿಸ್ಲೆರಿ ಬಾಟಲಿಗಿಂತಲೂ ಶುದ್ಧವಾದ ಹಾಗೂ ಶ್ರೀ ಧರ್ಮಸ್ಥಳದ ಮಂಜುನಾಥನ ಪಾದ ತೊಳೆಯುವಂತಹ ಪರಿಶುದ್ಧವಾದ ನೀರು ನಿಮ್ಮ ಮನೆ ಬಾಗಿಲಿಗೆ ಬರಲಿದೆ ಎಂದು ವೀರಪ್ಪಮೊಯ್ಲಿ ಹೇಳಿದರು.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ತಿಪ್ಪೇನಹಳ್ಳಿ ಗ್ರಾಮದಲ್ಲಿ ವೀರಪ್ಪಮೊಯ್ಲಿ ಚುನಾವಣಾ ಪ್ರಚಾರದ ಸಭೆ ನಡೆಸಿದರು. ಈ ವೇಳೆ ವೀರಪ್ಪಮೊಯಿಗೆ ಶಾಸಕ ಸುಧಾಕರ್ ಸಾಥ್ ನೀಡಿದರು.