Bengaluru City
ಪ್ರಭಾಸ್ ಕೈಗೆ ಎಕೆ-47 ಕೊಟ್ಟ ಪ್ರಶಾಂತ್ ನೀಲ್ – ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆ

ಬೆಂಗಳೂರು: ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಮುಂದಿನ ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆಯಾಗಿದೆ.
ಕೆಜಿಎಫ್ ಚಾಪ್ಟರ್-1 ಮತ್ತು ಕೆಜಿಎಫ್-2 ಚಿತ್ರಗಳು ಭಾರತ ಸಿನಿಮಾ ರಂಗದಲ್ಲಿ ಸಖತ್ ಟ್ರೆಂಡ್ ಸೆಟ್ ಮಾಡಿವೆ. ಈ ಸಿನಿಮಾಗಳ ನಿರ್ದೇಶನ ಮತ್ತು ಮೇಕಿಂಗ್ ನೋಡಿದ ಎಲ್ಲರೂ ಪ್ರಶಾಂತ್ ನೀಲ್ ನಿರ್ದೇಶನಕ್ಕೆ ಸ್ಟನ್ ಆಗಿದ್ದರು. ಕೆಜಿಎಫ್-2 ಸಿನಿಮಾ ಮುಗಿದ ಬಳಿಕ ಪ್ರಶಾಂತ್ ನೀಲ್ ಅವರು ಯಾವ ಸಿನಿಮಾ ಮಾಡಲಿದ್ದಾರೆ ಎಂದು ದೇಶಾದ್ಯಂತ ಅವರ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು.
ಈಗ ಈ ಕೂತೂಹಲಕ್ಕೆ ತೆರೆ ಬಿದ್ದಿದ್ದು, ಪ್ರಶಾಂತ್ ನೀಲ್ ನಿರ್ದೇಶನದ ಮುಂದಿನ ಪ್ಯಾನ್ ಇಂಡಿಯಾ ಮೂವಿ ಘೋಷಣೆಯಾಗಿದೆ. ಈ ಸಿನಿಮಾದಲ್ಲಿ ಬಾಹುಬಲಿ ಖ್ಯಾತಿಯ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಹೀರೋ ಆಗಿ ಅಭಿನಯಿಸಲಿದ್ದಾರೆ. ಜೊತೆಗೆ ನೀಲ್ ಪ್ರಭಾಸ್ ಜೋಡಿಯ ಮೊದಲ ಸಿನಿಮಾಗೆ ಸಲಾರ್ ಎಂದು ಹೆಸರಿಡಲಾಗಿದೆ. ಈ ಸಿನಿಮಾವನ್ನು ಕೆಜಿಎಫ್ ಸಿನಿಮಾವನ್ನು ನಿರ್ಮಾಣ ಮಾಡಿದ್ದ ವಿಜಯ್ ಕಿರಗಂದೂರ್ ಅವರ ಹೊಂಬಾಳೆ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಚಿತ್ರ ಸಿದ್ಧವಾಗಲಿದೆ.
#Prabhas in #SALAAR
THE MOST VIOLENT MEN.. CALLED ONE MAN.. THE MOST VIOLENT!!
Revealing our next Indian Film, an Action Saga.@VKiragandur @prashanth_neel pic.twitter.com/RqaIPwSUiB— Hombale Films (@hombalefilms) December 2, 2020
ಈ ವಿಚಾರವಾಗಿ ನವೆಂಬರ್ 30ರಂದೇ ಟ್ವೀಟ್ ಮಾಡಿದ್ದ ಹೊಂಬಾಳೆ ಫಿಲ್ಮ್ ಸಂಸ್ಥೆ, ಪ್ರಿಯ ಪ್ರೇಕ್ಷಕರೇ ನೀವು ಯಾವಾಗಲೂ ನಮ್ಮ ಸಿನಿಮಾವನ್ನು ನಮಗಿಂತ ಹೆಚ್ಚಾಗಿ ಪ್ರೀತಿ ಮಾಡಿದ್ದೀರಿ. ನಿಮ್ಮ ಈ ಪ್ರೀತಿಗೆ ಪಾತ್ರರಾಗಲು ನಾವು ಮೊತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ನಿಮ್ಮ ಮುಂದೆ ಬರಲಿದ್ದೇವೆ. ಈ ಸಿನಿಮಾದ ಬಗ್ಗೆ ಡಿಸೆಂಬರ್ 2ರಂದು ಮಾಹಿತಿ ನೀಡಲಿದ್ದೇವೆ ಎಂದು ಹೇಳಿತ್ತು.
ಅದರಂತೆ ಇಂದು ಎರಡು ಗಂಟೆ 9 ನಿಮಿಷಕ್ಕೆ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಎಕೆ-47 ಗನ್ ಹಿಡಿದುಕೊಂಡು ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ಬಿಡುಗಡೆ ಮಾಡಿದೆ. ಜೊತೆಗೆ ಅತ್ಯಂತ ಹಿಂಸಾತ್ಮಕ ಮನುಷ್ಯ, ಆತ ಒಬ್ಬನೇ, ಆದರೆ ಆತ ಬಹಳ ವೈಲೆಂಟ್ ಎಂದು ಬರೆದುಕೊಂಡಿದೆ. ಜೊತೆಗೆ ನಮ್ಮ ಮುಂದಿನ ಸಿನಿಮಾ ಇದೆ. ಇದು ಒಂದು ಆ್ಯಕ್ಷನ್ ಚಿತ್ರ ಎಂದು ತಿಳಿಸಿದೆ.
An Action Saga #SALAAR.
THE MOST VIOLENT MEN.. .CALLED ONE MAN… THE MOST VIOLENT!!
For the love of cinema, breaking the fence of languages, presenting to you an Indian Film.
Dearest welcome to Darling #Prabhas sir.@hombalefilms @VKiragandur pic.twitter.com/PKOfQKkSM6— Prashanth Neel (@prashanth_neel) December 2, 2020
ಈ ವಿಚಾರವಾಗಿ ಟ್ವೀಟ್ ಮಾಡಿರುವ ಪ್ರಶಾಂತ್ ನೀಲ್ ಅವರು, ಸಿನಿಮಾದ ಮೇಲಿರುವ ಪ್ರೀತಿ, ಭಾಷೆಯ ನಡುವೆ ಇರುವ ಬೇಲಿಯನ್ನು ಬ್ರೇಕ್ ಮಾಡುತ್ತೆ. ನಮ್ಮ ಮುಂದಿನ ಇಂಡಿಯಾ ಸಿನಿಮಾ ಸಲಾರ್ ಎಂದು ಘೋಷಣೆ ಮಾಡುತ್ತಿದ್ದೇವೆ. ಡಾರ್ಲಿಂಗ್ ಪ್ರಭಾಸ್ ಅವರನ್ನು ಆತ್ಮೀಯವಾಗಿ ಸ್ವಾಗತಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ. ಮೊದಲಿಗೆ ಉಗ್ರಂ ಸಿನಿಮಾ ನಿರ್ದೇಶನ ಮಾಡಿ ಗೆದ್ದಿದ್ದ ನೀಲ್ ನಂತರ ಕೆಜಿಎಫ್ ಮಾಡಿ ಭಾರತ ಸಿನಿಮಾ ರಂಗದಲ್ಲಿ ಮನೆಮಾತಾಗಿದ್ದರು.
