– ಜಡೆಯ ರೂಪದಲ್ಲಿ ತಳಕು ಹಾಕಿಕೊಂಡಿರೋ ಕೊಂಬೆಗಳು
ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ನಗರದ ಸದಾಶಿವನಗರದ ವಸತಿ ಪ್ರದೇಶದಲ್ಲಿ ಹತ್ತಿ (ಅರಳೆ) ಗಿಡದಲ್ಲಿ ಹೆಣ್ಣಿನ ಮುಖದ ಆಕೃತಿ ಮೂಡಿರುವುದು ಜನರಲ್ಲಿ ಕುತೂಹಲ ಮೂಡಿಸಿದೆ. ಸದ್ಯ ಗಿಡದಲ್ಲಿ ಹೆಣ್ಣಿನ ಮುಖ ಮೂಡಿದ ನಂತರ ಜನರು ಹತ್ತಿ ಗಿಡದಲ್ಲಿ ದೇವಿಯ ಮುಖ ಮೂಡಿದೆ ಎಂದು ಪೂಜೆ ಮಾಡಲು ಮುಗಿಬಿದ್ದಿದ್ದಾರೆ.
ಮೂರು ದಿನಗಳ ಹಿಂದೆ ಗಿಡದಲ್ಲಿ ಅಸ್ಪಷ್ಟವಾಗಿ ಗೋಚರಿಸುತ್ತಿದ್ದ ಮುಖದ ಆಕೃತಿ ಇದೀಗ ಸಂಪೂರ್ಣವಾಗಿ ಕಾಣುತ್ತಿದ್ದು, ಹತ್ತಿ ಗಿಡ ತುಂಬಾ ದೊಡ್ಡದಾಗಿ ಬೆಳೆಯುತ್ತಿದೆ. ಗಿಡದಲ್ಲಿ ಸುಮಾರು 12 ಅಡಿ ಎತ್ತರದಲ್ಲಿ ಮುಖದ ಆಕಾರ ಮೂಡಿದೆ.
ಅಕ್ಕಪಕ್ಕದ ಮನೆಯವರು ಕೂಡ ಎಂದೂ ಈ ಗಿಡಕ್ಕೆ ಪೂಜೆ ಮಾಡಿದವರಲ್ಲ. ಆದರೆ ಇದೀಗ ಮುಖದ ಆಕೃತಿಯನ್ನು ಕಂಡ ನಂತರ ಸ್ಥಳೀಯರು ಇದೂ ಏನೋ ದೈವಿಚ್ಛೆ ಎಂದು ಗಿಡಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಈ ವಿಷಯ ಹರಡಿದಂತೆಲ್ಲಾ ಜನರು ಗುಂಪು ಗುಂಪಾಗಿ ಬಂದು ನೋಡಿ ಆಶ್ಚರ್ಯ ಮತ್ತು ಭಕ್ತಿ ತೋರುತ್ತಿದ್ದಾರೆ. ಹಾಗೇ ಗಿಡದ ಒಂದು ಕಡೆ ಜಡೆಯ ರೂಪದಲ್ಲಿ ಕೊಂಬೆಗಳು ತಳಕು ಹಾಕಿಕೊಂಡು ಆಶ್ಚರ್ಯ ಮೂಡಿಸಿವೆ.