ನಿಖಿಲ್ ಕುಮಾರಸ್ವಾಮಿ ನಂತರ ಮತ್ತೊಬ್ಬ ರಾಜಕಾರಣಿ ಪುತ್ರ ದುಷ್ಯಂತ್ ಸಿನಿರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್ ಪುತ್ರ ದುಷ್ಯಂತ್ ಸಿನಿ ಲೋಕಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಬಣ್ಣದ ಲೋಕಕ್ಕೆ ತಂದೆಯ ರಾಜಕೀಯ ಕ್ಷೇತ್ರದ ಹೆಸರನ್ನು ಬಳಸಿಕೊಳ್ಳದೇ ತಮ್ಮದೇ ಮಾರ್ಗದಲ್ಲಿ ಸಾಗುವ ನಿಟ್ಟಿನಲ್ಲಿ ದುಷ್ಯಂತ್ ಕಳೆದ ಮೂರ್ನಾಲ್ಕು ವರ್ಷಗಳಿಂದ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ದುಷ್ಯಂತ್ ಅವರಿಗೆ ಚಂದನವನದ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರಾದ ಸಿಂಪಲ್ ಸುನಿ ಆಕ್ಷನ್ ಕಟ್ ಹೇಳಲು ಸಿದ್ಧರಾಗಿದ್ದಾರೆ. ಸುನಿ ಅವರು ಈಗಾಗಲೇ ‘ಬಜಾರ್’ ಸಿನಿಮಾ ಮೂಲಕ ಧನ್ವಿರ್ ಅವರನ್ನು ಚಂದನವನಕ್ಕೆ ಪರಿಚಯ ಮಾಡಿಸಿದ್ದು, ಮತ್ತೊಬ್ಬ ಯುವ ನಟನನ್ನು ಕನ್ನಡ ಪ್ರೇಕ್ಷಕರಿಗೆ ಪರಿಚಯಿಸಲು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಅಲಿಯಾ ನನ್ನ ಮೇಲೆ ಕೈ ಮಾಡಲು 20 ಟೇಕ್ ತೆಗೆದುಕೊಂಡಿದ್ರು: ‘ಗಂಗೂಬಾಯಿ’ನಲ್ಲಿ ಶಂತನು
ಸುನಿ ನಿದೇಶನದ ‘ಸಖತ್’ ಸಿನಿಮಾ ಕೆಲ ತಿಂಗಳ ಹಿಂದೆ ಬಿಡುಗಡೆಯಾಗಿದ್ದು, ಈ ಸಿನಿಮಾಗೆ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಕಾಮಿಡಿ ಸ್ಟಾರ್ ಶರಣ್ ನಟನೆಯ ‘ಅವತಾರ ಪುರುಷ’ ಸಿನಿಮಾ ಶೂಟಿಂಗ್ ಮುಗಿದಿದ್ದು, ರಿಲೀಸ್ಗೆ ರೆಡಿಯಾಗಿದೆ. ಈ ನಡುವೆ ಸುನಿ ಹೊಸ ಸಿನಿಮಾವನ್ನು ಮಾಡಲು ಸಜ್ಜಾಗಿದ್ದಾರೆ. ಇದಕ್ಕೆ ‘ಗತವೈಭವ’ ಎಂಬ ಪವರ್ಫುಲ್ ಟೈಟಲ್ ಸಹ ಕೊಟ್ಟಿದ್ದು, ಈ ಸಿನಿಮಾಗೆ ದುಷ್ಯಂತ್ ಬಣ್ಣ ಹಚ್ಚುತ್ತಿದ್ದಾರೆ. ಈ ಮೂಲಕ ಬಣ್ಣದ ಲೋಕಕ್ಕೆ ಬರಲು ಫುಲ್ ರೆಡಿಯಾಗುತ್ತಿದ್ದಾರೆ.
ನಟನೆ ಕುರಿತು ಮಾತನಾಡಿದ ಅವರು, 2017ರಲ್ಲೇ ನಾನು ನಟನಾಗಬೇಕು ಎಂದು ನಿರ್ಧರಿಸಿ ಸಿನಿಮಾಗಾಗಿ ನನ್ನನ್ನು ನಾನು ತಯಾರಿ ಮಾಡಿಕೊಳ್ಳುತ್ತಿದ್ದೇನೆ. ‘ಟೆಂಟ್ ಸಿನಿಮಾ’ ಅಭಿನಯ ಶಾಲೆಯಲ್ಲಿ ಮೂರು ವರ್ಷದ ಕೋರ್ಸ್ ಮಾಡಿದ್ದೇನೆ. ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಸಿನಿಮಾ ವಿಷಯವಾಗಿ ಕಲಿತಿದ್ದೇನೆ. ಬೀದಿ ನಾಟಕ, ಕಿರುಚಿತ್ರ, ಮ್ಯೂಸಿಕ್ ವೀಡಿಯೋ ಹೀಗೆ ನಟನೆಗೆ ಒತ್ತು ಕೊಡುವಂತಹ ಹಲವು ಕೆಲಸಗಳನ್ನು ಮಾಡಿದ್ದೇನೆ ಎಂದು ವಿವರಿಸಿದರು.
2019ರಲ್ಲಿ ರಂಗಕರ್ಮಿ ಕೃಷ್ಣ ಅವರ ಆ್ಯಕ್ಟಿಂಗ್ ವಕ್ರ್ಶಾಪ್ನಲ್ಲಿ ಪಾಲ್ಗೊಂಡಿದ್ದೆ. ಪುಷ್ಕರ್ ಆ್ಯಕ್ಟಿಂಗ್ ಇನ್ಸ್ಟಿಟ್ಯೂಟ್ನಲ್ಲಿ ನಟನೆಯನ್ನು ಕಲಿತಿದ್ದೇನೆ. ನೀನಾಸಂನ ಧನಂಜಯ ಅವರ ಬಳಿಯೂ ಒಂದಷ್ಟು ದಿನಗಳ ಕಾಲ ನಟನಾ ಪಟ್ಟುಗಳನ್ನು ತಿಳಿದುಕೊಂಡಿದ್ದೇನೆ. ಟಗರು ರಾಜು, ಭೂಷಣ್ ಕುಮಾರ್ ಹೀಗೆ ಹಲವರಿಮ್ ಡ್ಯಾನ್ಸ್ ಕಲಿತ್ತಿದ್ದೇನೆ. ಮಾರ್ಷಲ್ ಆರ್ಟ್ಸ್, ಜಿಮ್ನಾಸ್ಟಿಕ್ ಸೇರಿದಂತೆ ಒಬ್ಬ ನಾಯಕ ಏನೇನು ಕಲಿತಿರಬೇಕೋ ಅವೆಲ್ಲವನ್ನೂ ಕಲಿತು ನಂತರ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಸೋದರಸಂಬಂಧಿ ಮದುವೆಯಲ್ಲಿ ಯಶ್ ಫ್ಯಾಮಿಲಿ ಫುಲ್ ಮಿಂಚಿಂಗ್!
‘ಗತವೈಭವ’ ಸಿನಿಮಾ ಕುರಿತು ಮಾತನಾಡಿದ ಸುನಿ, ಈ ಸಿನಿಮಾದಲ್ಲಿ ಹೆಚ್ಚು ಪ್ರೇಮಕಥೆಯನ್ನು ಎಣೆಯಲಾಗಿದೆ. ಸೈಂಟಿಫಿಕ್ ಥ್ರಿಲ್ಲರ್ ರೀತಿಯಲ್ಲಿ ಸ್ಟೋರಿಯನ್ನು ಹೇಳಲಾಗಿದೆ. ದುಷ್ಯಂತ್ ಜೊತೆ ನಾನು ‘ರಾಬಿನ್ ಹುಡ್’ ಸಿನಿಮಾ ಮಾಡಬೇಕಿತ್ತು. ಆದರೆ ಆ ಸಿನಿಮಾವನ್ನು ಕೆಲವು ಕಾರಣಗಳಿಂದ ಮುಂದೆ ಹಾಕಿದ್ದೇವೆ. ‘ಗತವೈಭವ’ ಸ್ಟೋರಿ ‘ದುಷ್ಯಂತ್’ ಅವರಿಗೆ ಸೂಟ್ ಆಗುತ್ತೆ. ಈ ಸಿನಿಮಾಗಾಗಿ ಅವರು ತುಂಬಾ ಶ್ರಮವನ್ನು ಪಡುತ್ತಿದ್ದಾರೆ. ನನ್ನ ‘ಅವತಾರ ಪುರುಷ’ ಸಿನಿಮಾ ಬಿಡುಗಡೆಯಾದ ನಂತರ ಈ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ ಎಂದು ತಿಳಿಸಿದರು.