ರಾಯಚೂರು: ಸರ್ಕಾರಿ ನಿಯಂತ್ರಣದಿಂದ ಹಿಂದೂ ಧಾರ್ಮಿಕ ದೇವಾಲಯಗಳಿಗೆ ಸ್ವಾತಂತ್ರ್ಯ ನೀಡಲಾಗುವುದು ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿಲುವನ್ನು ರಾಯಚೂರಿನಲ್ಲಿ ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಸ್ವಾಗತಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಸರ್ಕಾರದ ಅಧೀನದಲ್ಲಿನ ದೇವಸ್ಥಾನ ಬೇರ್ಪಡಿಸುವ ವಿಚಾರ ಸೂಕ್ತ ನಿರ್ಧಾರವಾಗಿದೆ. ಆಸಕ್ತಿ ಇರುವವರು ಧಾರ್ಮಿಕ ಮುಖಂಡರ ನೇತೃತ್ವದಲ್ಲಿ ದೇವಾಲಯಗಳ ನಿರ್ವಹಣೆ ಮಾಡುವುದು ಒಳ್ಳೆಯದು. ಅಲ್ಲದೇ ದೇಗುಲಗಳ ಅಭಿವೃದ್ಧಿ, ಉತ್ಸವ ಉಸ್ತುವಾರಿ ನೀಡುವುದು ಸೂಕ್ತ. ಸಿಎಂ ಅವರ ಈ ನಿರ್ಧಾರ ಕೂಡಲೇ ಕಾರ್ಯರೂಪಕ್ಕೆ ಬರಲಿ ಎಂದು ಆಶಿಸಿದರು. ಇದನ್ನೂ ಓದಿ: ಹಗಲು ಹೊತ್ತಿನಲ್ಲೇ ಬ್ಯಾಂಕ್ ದರೋಡೆ – ಸಿಬ್ಬಂದಿ ಹತ್ಯೆ
ಹಿಂದೂ ದೇವಸ್ಥಾನಗಳಿಗೆ ವಿಶೇಷ ಕಾನೂನು ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ ಅಧಿವೇಶನದಲ್ಲಿ, ಹಿಂದೂ ದೇವಸ್ಥಾನಗಳಿಗೆ ಒಂದು ಕಾನೂನು ತರುತ್ತೇವೆ ಎಂಬ ಭರವಸೆಯನ್ನು ನೀಡಿದ್ದರು. ಈ ಹಿನ್ನೆಲೆ ಸುಬುಧೇಂದ್ರ ತೀರ್ಥರು ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಬೇರೆ ಸಮುದಾಯಗಳ ಪ್ರಾರ್ಥನಾ ಸ್ಥಳಗಳು ಸ್ವಾತಂತ್ರ್ಯವಾಗಿವೆ. ಹಿಂದೂಗಳ ದೇವಾಲಯಗಳು ಹಲವು ನಿಯಮಗಳ ನಿಯಂತ್ರಣದಲ್ಲಿ ಇವೆ. ದೇವಸ್ಥಾನಗಳನ್ನು ಸರ್ಕಾರದ ಕಟ್ಟುಪಾಡುಗಳಿಗೆ ಒಳಪಡಿಸಲಾಗಿದ್ದು, ಬಜೆಟ್ ಅಧಿವೇಶನದಲ್ಲಿ ಹಿಂದೂ ದೇವಸ್ಥಾನಗಳಿಗೆ ಒಂದು ಕಾನೂನು ತರುತ್ತೇವೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಯಾರಿಗೆ ಬೇಕು?: ಹೆಚ್.ಡಿ.ದೇವೇಗೌಡ