Crime
ಉಗ್ರರ ಪರ ಗೋಡೆ ಬರಹ ಬರೆದವರಿಗೆ ಸೌದಿ ಅರೇಬಿಯಾದ ಉಗ್ರರ ಲಿಂಕ್

– ಲುಕ್ ಔಟ್ ನೋಟಿಸ್ಗೆ ಪೊಲೀಸರ ಸಿದ್ಧತೆ
ಮಂಗಳೂರು: ನಗರದ ಎರಡು ಕಡೆ ಬರೆದ ಉಗ್ರರ ಪರ ಗೋಡೆ ಬರಹ ಪ್ರಕರಣಕ್ಕೆ ಸಂಬಂಧಿಸದಂತೆ ತನಿಖೆ ಮುಂದುವರಿದಿದೆ. ಈವರೆಗೂ ಒಟ್ಟು ಮೂವರು ಆರೋಪಿಗಳ ಬಂಧನವಾಗಿದ್ದು, ಹಲವು ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಮಂಗಳೂರು ಸೇರಿದಂತೆ ವಿವಿಧ ಕಡೆ ವಿಧ್ವಂಸಕಕಾರಿ ಕೃತ್ಯ ಎಸಗುವ ಸಲುವಾಗಿ ಸೌದಿ ಅರೇಬಿಯಾದಲ್ಲಿ ಒಂದು ಉಗ್ರರ ತಂಡ ಕಾರ್ಯನಿರ್ವಹಿಸುತ್ತಿರೋದು ಬೆಳಕಿಗೆ ಬಂದಿದೆ. ಇನ್ನು ಈ ಪ್ರಕರಣದಲ್ಲಿ ಬಂಧಿತರಾಗಿರೋ ಆರೋಪಿಗಳಾದ ಮಹಮ್ಮದ್ ಶಾರೀಖ್ ಮತ್ತು ಮಾಝ್ ಮುನೀರ್ ಅಹ್ಮದ್ ಇಬ್ಬರು ಕೂಡ ಗೋಡೆಬರಹಕ್ಕೂ ಮುನ್ನ ಸೌದಿ ಅರೇಬಿಯಾದಲ್ಲಿರುವ ವ್ಯಕ್ತಿಗಳೊಂದಿಗೆ ಮಾತನಾಡಿರೋದು ಬೆಳಕಿಗೆ ಬಂದಿದೆ. ಇನ್ನು ಇವರಿಬ್ಬರು ಮಾತನಾಡಿದ ವ್ಯಕ್ತಿಗಳು ಉಗ್ರರೇ ಇರಬಹುದಾ ಅನ್ನೋ ಅನುಮಾನ ಪೊಲೀಸರಿಗೆ ಉಂಟಾಗಿದ್ದು, ಆ ವ್ಯಕ್ತಿಗಳ ವಿವರ ಪಡೆದು ಲುಕ್ ಔಟ್ ನೋಟಿಸ್ ಹೊರಡಿಸುವ ಸಿದ್ಧತೆಗಳನ್ನು ಪೊಲೀಸರು ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿದ್ದಾರೆ.
ಉಗ್ರ ಪರ ಗೋಡೆ ಬರಹ ಬರೆದ ಆರೋಪಿಗಳಾದ ಶಾರೀಖ್ ಮತ್ತು ಮುನೀರ್ ನ ಮೊಬೈಲ್ ನಲ್ಲಿದ್ದ ವಾಟ್ಸಪ್ ಗ್ರೂಪ್ ನ ಆಡ್ಮಿನ್ ಗಳ ಬಂಧನಕ್ಕೆ ತೆರಳಲಾಗಿದೆ. ಇಡೀ ಭಾರತಾದ್ಯಂತ ವಿವಿಧ ರಾಜ್ಯಗಳ ಸದಸ್ಯರು ಈ ಗ್ರೂಪ್ ನಲ್ಲಿದ್ರು ಅನ್ನೋ ಸ್ಟೋಟಕ ವಿಚಾರ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಮಹಮ್ಮದ್ ಶಾರೀಖ್ ನ ಚಿಕ್ಕಪ್ಪ ಸಾದತ್ ನ ವಿಚಾರಣೆಯಲ್ಲಿ ಹಲವು ಅಂಶಗಳು ಬೆಳಕಿಗೆ ಬಂದಿದೆ. ಸದ್ಯ ಸಾದತ್ ಗೆ ಜಾಮೀನು ಮಂಜೂರಾಗಿದ್ದು ಆತ ನೀಡಿದ ಸ್ಟೋಟಕ ಮಾಹಿತಿಯನ್ನು ಹೊರ ಹಾಕಿದ್ದಾನೆ.
ಗೋಡೆ ಬರಹ ಬರೆದ ಬಳಿಕ ತಪ್ಪಿಸಿಕೊಳ್ಳಲು ವ್ಯವಸ್ಥೆ ಮಾಡಿದ್ದ ಈ ಸಾದತ್. ಇವರ ಇಂತಹ ದೇಶದ್ರೋಹಿ ಚಟುವಟಿಕೆಗೆ ಹಣ ಪೂರೈಕೆ ಮಾಡುತ್ತಿದ್ದ ಮಹಮದ್ ಶಾರೀಕ್ ನನ್ನು ಟೆರರಿಸ್ಟ್ ಅಂತಾ ಕರೆಯುತ್ತಿದ್ದರು ಅಂತಾ ಮಾಹಿತಿ ನೀಡಿದ್ದಾನೆ.
ಮಂಗಳೂರು ಸಿಸಿಬಿ ಪೊಲೀಸರು, ನಗರ ಕೇಂದ್ರ ಎಸಿಪಿ ಜಗದೀಶ್ ನೇತೃತ್ವದ ತಂಡ ಹಾಗೂ ವಿಶೇಷ ತಂಡಗಳು ವಿವಿಧ ಕಡೆ ಕಾರ್ಯಾಚರಣೆ ನಡೆಸುತ್ತಿವೆ. ಈ ಪ್ರಕರಣದಲ್ಲಿ ಉಗ್ರರ ಲಿಂಕ್ ಬಗ್ಗೆ ಮಾಹಿತಿ ಸಿಕ್ಕಿದ್ದು ಎನ್.ಐ.ಎ ಕೂಡ ಎಂಟ್ರಿ ಆಗುವ ಸಾಧ್ಯತೆಗಳು ಹೆಚ್ಚಾಗಿದೆ.
