ಬೀದರ್: ವೀರಶೈವ (VeeraShivas) ಜಂಗಮರು, ದೊಡ್ಡ-ದೊಡ್ಡ ಪೀಠಾಧ್ಯಕ್ಷರು ಎಲ್ಲ ಸ್ವಾಮೀಜಿಗಳು ವಿಧಾನಸೌಧದ ಮುಂದೆ ಬನ್ನಿ, ಬಂದು ನಮ್ಮಲ್ಲಿ ದಲಿತರ ರಕ್ತ ಹರಿಯುತ್ತಿದೆ ಎಂದು ಬಹಿರಂಗವಾಗಿ ಸುದ್ದಿಗೋಷ್ಠಿ ಮಾಡಿ ಹೇಳಿ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಮಠಾಧೀಶರಾದ ಜ್ಞಾನ ಪ್ರಕಾಶ ಸ್ವಾಮೀಜಿ (Jnanaprakash Swamiji) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ನಾವು ಹೊಲೆಯಾ, ಮಾದಿಗರಿಗೆ ಹುಟ್ಟಿದ್ದೇವೆ. ನಾವೆಲ್ಲ ಅಣ್ಣ ತಮ್ಮಂದಿರು, ನಾವೆಲ್ಲ ಸಮಾನರಾಗಿರೋಣ ಎಂದು ಹೇಳಿ ಬೇಕಿದ್ದರೆ ನಾನು ಬರುತ್ತೇನೆ. ಚರ್ಚೆ ಮಾಡೋಣ ಎಂದು ವೀರಶೈವ, ಲಿಂಗಾಯತ ಜಂಗಮರಿಗೆ ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ನಿಂದ `ಸಿಎಂ ಅಂಕಲ್’ ಅಭಿಯಾನ – ಭುಗಿಲೆದ್ದ ಕೇಸರಿ ವಿವಾದ, ಸರ್ಕಾರಕ್ಕೆ ಹಲವು ಪ್ರಶ್ನೆ
ನಂತರ ನೀವು ಸರ್ಟಿಫಿಕೇಟ್ ತೆಗೆದುಕೊಳ್ಳಿ ಬೇಡ ಅಂತ ಹೇಳಲ್ಲ ಎಂದು ಪಂಚ ಪೀಠದ ಜಗದ್ಗುರುಗಳನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ಇದನ್ನೂ ಓದಿ: ಸಕ್ಕರೆ ಕಾಯಿಲೆ ಇರುವವರಿಗೆ ಬೇರೆ ಊಟ – ಹೊಸ ಮೆನುವಿಗೆ ರೈಲ್ವೆ ಮಂಡಳಿ ಸೂಚನೆ
ಎಸ್ಟಿ-ಎಸ್ಟಿ ವರ್ಗದವರನ್ನ (SCST Community) ಮುಟ್ಟಬಾರದು ಅಂತಾರೆ, ಹಾಗಾದ್ರೆ ಐದು ವರ್ಷಕ್ಕೊಮ್ಮೆ ವೋಟಿಗಾಗಿ ಎಲ್ಲರೂ ಬಂದು ಕಾಲಿಗೆ ನಮಸ್ಕಾರ ಮಾಡ್ತಾರೆ. ಅಂಬೇಡ್ಕರರು (Ambedkar) ಸಂವಿಧಾವನ್ನು (Constitution) ಎಚ್ಚರಿಕೆಯಿಂದ ಮಾಡಿದ್ದಾರೆ. ನಮ್ಮೆಲ್ಲರಿಗೂ ಮತದಾನದ ಹಕ್ಕು ಕೊಟ್ಟಿದ್ದಾರೆ. ಆದರೆ ನಾವು ನಮ್ಮೆಲ್ಲಾ ಆಯುಧಗಳನ್ನು ಉಳ್ಳವರ ಕೈಗೆ ಕೊಟ್ಟು ಸುಮ್ಮನಿದ್ದೇವೆ ಬೇಸರ ವ್ಯಕ್ತಪಡಿಸಿದ್ದಾರೆ.