ಲಕ್ನೋ: ಸಂಬಳವನ್ನು ಸರಿಯಾಗಿ ನೀಡದ ಮಾಲೀಕನಿಗೆ ಬುದ್ಧಿ ಕಲಿಸಲು ಮಾಲೀಕನ ಮರ್ಸಿಡಿಸ್(Mercedes) ಕಾರನ್ನೇ ಕಾರ್ಮಿಕನೊಬ್ಬ(Labourer) ಸುಟ್ಟ ಘಟನೆ ನೋಯ್ಡಾದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದಲ್ಲಿ ನೋಯ್ಡಾದಿಂದ(Noida) ಈ ಘಟನೆ ನಡೆದಿದೆ. ರಣವೀರ್ ಐಷಾರಾಮಿ ಕಾರನ್ನು(Car) ಸುಟ್ಟ ವ್ಯಕ್ತಿ. ಈತ ಮಾಲೀಕನ ಮನೆಗೆ ಟೈಲ್ಸ್ ಅಳವಡಿಸಿದ್ದನು. ಆದರೆ ರಣವೀರ್ಗೆ ಮಾಲೀಕ ಪೂರ್ಣ ಸಂಬಳ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಬೇಸರಗೊಂಡ ರಣವೀರ್ ಮಾಲೀಕನ ಐಷಾರಾಮಿ ಕಾರನ್ನು ಸುಟ್ಟು ತನ್ನ ಸೇಡನ್ನು ತೀರಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಕಾರಿಗೆ ಬೆಂಕಿ ಹಚ್ಚಿ ರಣವೀರ್ ಪರಾರಿಯಾಗಿದ್ದಾನೆ. ಇದೀಗ ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೋದಲ್ಲಿ ಏನಿದೆ?: ರಣವೀರ್ ಬೈಕ್ನಲ್ಲಿ ಬಂದು ಕಾರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿ ಕಾರಿಗೆ ಹತ್ತುದ್ದಿದ್ದಂತೆ ರಣವೀರ್ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಘಟನೆ ನೋಯ್ಡಾದ ಸದರ್ಪುರದಲ್ಲಿ ನಡೆದಿದ್ದು, ಇಡೀ ಘಟನೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಮೇಲ್ಜಾತಿಯ ಜನರಿಗೆ ಸೇರಿದ ಮಡಿಕೆಯಿಂದ ನೀರು ಕುಡಿದ ದಲಿತನ ಮೇಲೆ ಹಲ್ಲೆ
Man sets Mercedes on fire after the owner failed to pay the full amount of flooring work. The incident took place in Noida. pic.twitter.com/G7meDA2EpR
— The Moon I Could See (@TheMoonICouldS) September 14, 2022
ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ ಘಟನೆಗೆ ಸಂಬಂಧಿಸಿ ರಣವೀರ್ನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮರ್ಸಿಡಿಸ್ ಮಾಲೀಕರು ನೀಡಿದ ದೂರಿನ ನಂತರ ಅವರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಶಾಲೆಗೆ ನುಗ್ಗಿ ಶಿಕ್ಷಕಿ ಮೇಲೆ ಕುಡುಕನಿಂದ ಹಲ್ಲೆ