ಜೊತೆ ಜೊತೆಯಲಿ ಧಾರಾವಾಹಿಗೆ ನಟ ಹರೀಶ್ ರಾಜ್ ಎಂಟ್ರಿ ಕೊಟ್ಟಿದ್ದಾರೆ. ಎರಡು ದಿನಗಳಿಂದ ಹರೀಶ್ ರಾಜ್ ದೃಶ್ಯಗಳು ಪ್ರಸಾರವಾಗುತ್ತಿವೆ. ಹರೀಶ್ ರಾಜ್ ಈ ಧಾರಾವಾಹಿಯಲ್ಲಿ ಅನಿರುದ್ಧ ಬಿಟ್ಟು ಹೋಗಿದ್ದ ಆರ್ಯವರ್ಧನ್ ಪಾತ್ರವನ್ನು ನಿರ್ವಹಿಸುತ್ತಾರೆ ಎನ್ನಲಾಗಿತ್ತು. ಆದರೆ, ಆರ್ಯವರ್ಧನ್ ತಮ್ಮನಾಗಿ ಹರೀಶ್ ರಾಜ್ ಧಾರಾವಾಹಿಗೆ ಪ್ರವೇಶ ಮಾಡಿದ್ದಾರೆ. ಅದೂ ವಿಶ್ವಾಸ್ ದೇಸಾಯಿ ಪಾತ್ರದಲ್ಲಿ ಎನ್ನುವುದು ವಿಶೇಷ.
ಪ್ರಿಯದರ್ಶಿನಿಗೆ ಇಬ್ಬರು ಮಕ್ಕಳು. ಒಬ್ಬ ಆರ್ಯವರ್ಧನ್, ಮತ್ತೊಬ್ಬ ವಿಶ್ವಾಸ್ ದೇಸಾಯಿ. ವಿದೇಶದಲ್ಲಿ ಬ್ಯುಸಿನೆಟ್ ಮಾಡುತ್ತಿದ್ದ ವಿಶ್ವಾಸ ಇದೀಗ ಸ್ವದೇಶಕ್ಕೆ ಬಂದಿದ್ದಾನೆ. ಅದೂ 700 ಕೋಟಿ ಲಾಸ್ ಮಾಡಿಕೊಂಡು. ಈ ಲಾಸ್ ಕಟ್ಟಿಕೊಡಲು ಏನು ಮಾಡಬೇಕು ಎನ್ನುವ ಒದ್ದಾಟ ಅವನದ್ದು. ಕಿರಿ ಮಗನ ಸಂಕಟ ನೋಡಲಾಗಿದೆ. ಆರ್ಯವರ್ಧನ್ ಸಹಾಯ ಕೇಳುವುದಾಗಿ ಪ್ರಿಯದರ್ಶಿನಿ ಹೇಳಿದ್ದಾರೆ. ಇದರ ಮಧ್ಯೆ ಧಾರಾವಾಹಿ ತಂಡ ಮತ್ತೊಂದು ಟ್ವಿಸ್ಟ್ ಕೊಟ್ಟಿದೆ. ಅದು ಜೋಗತಿ ಮೂಲಕ. ಇದನ್ನೂ ಓದಿ: ನೂಡಲ್ಸ್ ಬಿಡಿಸು ಅಂದ್ರೆ ಮೂಲಂಗಿ ಬಿಡಿಸ್ತಾಳೆ – ಸೋನು ಪೇಂಟಿಂಗ್ಗೆ ರಾಕೇಶ್ ಫುಲ್ ಶಾಕ್..!
ಮನೆಗೆ ಬರುವ ಜೋಗತಿ, ‘ನಿಮ್ಮಿಬ್ಬರ ಮಕ್ಕಳಲ್ಲಿ ಒಬ್ಬರಿಗೆ ಕಂಟಕ ಎದುರಾಗಲಿದೆ’ ಎಂದು ಪ್ರಿಯದರ್ಶಿನಿಗೆ ಹೇಳಿದ್ದಾಳೆ. ಜೋಗತಿ ಹೇಳಿದಂತೆ ಆಗುವುದರಿಂದ ಪ್ರಿಯದರ್ಶಿನಿಗೆ ಆತಂಕ ಶುರುವಾಗಿದೆ. ಯಾವ ಮಗನಿಗೆ ಏನು ಆಗಲಿದೆ ಎನ್ನುವುದು ಆಕೆಯ ಸಂಕಟ. ಇಂತಹ ಕುತೂಹಲದೊಂದಿಗೆ ಹರೀಶ್ ರಾಜ್ ಪಾತ್ರ ಆಗಮನವಾಗಿದೆ. ಆರ್ಯವರ್ಧನಿಗೆ ಸಂಕಟ ತಂದು ಮನೆಯಿಂದ ಕಳುಹಿಸುತ್ತಾರಾ? ಅಥವಾ ಆ ಪಾತ್ರಕ್ಕೆ ಬೇರೆಯವರನ್ನು ಆಯ್ಕೆ ಮಾಡಿಕೊಳ್ಳುತ್ತಾರಾ ಕಾದು ನೋಡಬೇಕು.