ನವದೆಹಲಿ: ಎನ್ಕೌಂಟರ್ನಲ್ಲಿ ಮೃತಪಟ್ಟಿದ್ದ ಉಗ್ರನ(Terrorist) ಅಂತಿಮ ವಿಧಿವಿಧಾನಗಳನ್ನು ನಿರ್ವಹಿಸಲು ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲು ಕೋರಿ ಸುಪ್ರೀಂಕೋರ್ಟ್ಗೆ(Supreme Court) ಉಗ್ರನ ತಂದೆ ಸಲ್ಲಿದ್ದ ಅರ್ಜಿಯನ್ನು(Plea) ವಜಾಗೊಳಿಸಲಾಗಿದೆ.
ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ(Jammu and Kashmir) ಹೈದರ್ಪೋರಾದಲ್ಲಿ ಭದ್ರತಾಪಡೆಯಿಂದ ನಡೆದ ಎನ್ಕೌಂಟರ್ನಲ್ಲಿ(Encounter) ಅಮಿರ್ ಮಗ್ರೆ ಹತನಾಗಿದ್ದ. ಆದರೆ ಆತ ನಿರಪರಾಧಿಯಾಗಿದ್ದ ಹಾಗೂ ಆತನಿಗೆ ಯೋಗ್ಯ ಸಮಾಧಿಯನ್ನು ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಔಪಚಾರಿಕವಾಗಿ ಶವವನ್ನು ಹೊರತೆಗೆದು ಅಂತ್ಯಸಂಸ್ಕಾರ ಮಾಡಲು ಕುಟುಂಬಸ್ಥರಿಗೆ ಅವಕಾಶ ನೀಡಬೇಕು ಎಂದು ಅಮಿರ್ ತಂದೆ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದರು.
ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ಜೆ ಬಿಪರ್ದಿವಾಲಾ ಅವರ ಪೀಠವು ಈ ಅರ್ಜಿಯನ್ನು ವಜಾಗೊಳಿಸಿದೆ. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಕ್ ಹೈಕೋರ್ಟ್ ನೀಡಿದ ತೀರ್ಪು ನ್ಯಾಯುತವಾಗಿದೆ. ಅದನ್ನೇ ಅನುಸರಿಸಲು ಅಮಿರ್ ತಂದೆ ಮೊಹಮ್ಮದ್ ಲಿತೀಫ್ ಮ್ಯಾಗ್ರಿಗೆ ಪೀಠ ತಿಳಿಸಿದೆ. ಇದನ್ನೂ ಓದಿ: ಜ್ಞಾನವಾಪಿ ಕೇಸ್ ಪೂಜಾ ಸ್ಥಳಗಳ ಕಾಯ್ದೆಯ ವ್ಯಾಪ್ತಿಗೆ ಒಳಪಡಲ್ಲ: ವಾರಣಾಸಿ ಕೋರ್ಟ್ ಹೇಳಿದ್ದೇನು?
ಶವವನ್ನು ಸಮಾಧಿ ಮಾಡಿದ ನಂತರ ಅದನ್ನು ಕಾನೂನಿನ ಕಸ್ಟಡಿಯಲ್ಲಿದೆ ಎಂದು ಪರಿಗಣಿಸಲಾಗುತ್ತದೆ. ಒಮ್ಮೆ ಸಮಾಧಿ ಮಾಡಿದರೆ ಅದಕ್ಕೆ ಮತ್ತೆ ತೊಂದರೆ ಮಾಡಬಾರದು. ನ್ಯಾಯದ ಹಿತಾಸಕ್ತಿಗಳಿಗೆ ಆ ಶವವು ಅಗತ್ಯವಿದ್ದಾಗ ಮಾತ್ರ ತೆಗೆಯಲಾಗುತ್ತದೆ. ಆದರೆ ಇದರಲ್ಲಿ ಯಾವುದೇ ನ್ಯಾಯ ಹಿತಾಸಕ್ತಿಗಳು ಕಾಣುತ್ತಿಲ್ಲ. ಆಡಳಿತವು ಶವಕ್ಕೆ ಅಂತ್ಯಸಂಸ್ಕಾರವನ್ನು ನೀಡಿಲ್ಲ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಅಷ್ಟೇ ಅಲ್ಲದೇ ಶವವನ್ನು ಹೊರತೆಗೆಯುವುದರಿಂದ ಕಾನೂನು ಸುವ್ಯವಸ್ಥೆಗೆ ಸಮಸ್ಯೆ ಆಗುತ್ತದೆ. ಇದರಿಂದಾಗಿ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ಬಾಬರಿ ಮಸೀದಿ ಕೇಸ್ ಬಳಿಕ ನಾವು ಅದೇ ಹಾದಿಯಲ್ಲಿ ಸಾಗುತ್ತಿದ್ದೇವೆ: ಓವೈಸಿ