ಹುಬ್ಬಳ್ಳಿ: ತಾರಿಹಾಳ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಖಾಸಗಿ ಬಸ್-ಲಾರಿ ನಡುವೆ ಮುಖಾಮುಖಿ ಡಿಕ್ಕಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ.
ಪಿಯುಸಿ ಅಡ್ಮಿಷನ್ಗೆ ಹೊರಟಿದ್ದ ವಿದ್ಯಾರ್ಥಿ ಮೊಹಮ್ಮದ್ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಈತ ಮೈಸೂರಿನಿಂದ ಕೊಲ್ಲಾಪುರದಲ್ಲಿರುವ ಚಿಕ್ಕಪ್ಪನ ಮನೆಗೆ ರಜೆಗೆ ತೆರಳಿದ್ದ. ಹೀಗೆ ಬಸ್ಸಿನಲ್ಲಿ ಹೊರಟಿದ್ದ ಮೊಹಮ್ಮದ್ ಇದೀಗ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ಇದನ್ನೂ ಓದಿ: ಹುಬ್ಬಳ್ಳಿ ಅಪಘಾತ ಪ್ರಕರಣ- ಇನ್ನೂ ಐದಾರು ಜನರ ಸ್ಥಿತಿ ಚಿಂತಾಜನಕವಾಗಿದೆ: ಕಿಮ್ಸ್ ನಿರ್ದೇಶಕ
ಮೊಹಮ್ಮದ್ ಎಸ್ಎಸ್ಎಲ್ಸಿಯಲ್ಲಿ 450 ಅಂಕಗಳನ್ನ ಗಳಿಸಿದ್ದ. ಹೀಗಾಗಿ ಪಿಯುಸಿ ಆಡ್ಮಿಷನ್ ಮಾಡಿಸಲು ಸೋಮವಾರ ಕೊಲ್ಲಾಪುರಿಂದ ಹೊರಟಿದ್ದ. ಆದರೆ ವಿಧಿಯಾಟಕ್ಕೆ ಮೊಹಮ್ಮದ್ ಬಲಿಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.