ಮಂಗಳೂರು: ನಾನು ಎಲ್ಲಾ ಜಾತಿ, ಧರ್ಮದ ಜನರನ್ನು ಪ್ರೀತಿಸುತ್ತೇನೆ. ಹಾಗೆಯೇ ಎಲ್ಲರೊಂದಿಗೂ ಬೆರೆಯುವವನು. ಹೀಗಾಗಿ ಜನರ ಪ್ರೀತಿಯ ಮೂಲಕ ನಾನು ದೇವರನ್ನು ಕಾಣುತ್ತೇನೆ. ಅವರ ಆಶೀರ್ವಾದವೇ ನನಗೆ ರಕ್ಷಣೆ ಅಂತ ಸಚಿವ ರಮಾನಾಥ ರೈ ಪ್ರತಿಕ್ರಿಯಿಸಿದ್ದಾರೆ.
ಗೌರಿ ಹತ್ಯೆಯ ಶಂಕಿತರು ತನ್ನ ಮೇಲೆ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಮಾಹಿತಿಯ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಈ ಬಗ್ಗೆ ನನಗೆ ನಿಖರ ಮಾಹಿತಿಯಿಲ್ಲ. ನಾವು ಜನರನ್ನು ಪ್ರೀತಿಸೋರು. ಎಲ್ಲರ ಜೊತೆ ಬೆರೆಯುವವರು. ಸನಾತನ ಹಿಂದೂ ಧರ್ಮದ ವಿಚಾರಗಳನ್ನು ಬಹಳ ಆಳವಾಗಿ ತಿಳಿದುಕೊಂಡವರು. ಸನತಾನ ಹಿಂದೂ ಧರ್ಮದ ಎಲ್ಲಾ ಆಚಾರ-ವಿಚಾರಗಳನ್ನು ಕರಾರುವಕ್ಕಾಗಿ ಮಾಡುತ್ತೇನೆ. ನಾಗಮಂಡಲದಂತಹ ಕಾರ್ಯಕ್ರಮ, ದೇವಸ್ಥಾನದ ಜೀರ್ಣೋದ್ಧಾರ, ಇದರ ಜೊತೆ ಎಲ್ಲಾ ಧರ್ಮದ ಕೇಂದ್ರಗಳ ಅಭಿವೃದ್ಧಿಗಳಲ್ಲಿ ನನ್ನ ಪಾತ್ರವಿದೆ ಅಂತ ಹೇಳಿದ್ರು. ಇದನ್ನೂ ಓದಿ: ಗೌರಿ ಹತ್ಯೆಗೆ ಆಯುಧ ಒದಗಿಸಿದ್ದು ನಾನೇ – ಎಸ್ಐಟಿ ಮುಂದೆ ನವೀನ್ ಹೇಳಿಕೆ
ಕಷ್ಟದಲ್ಲಿ ಬಂದಂತಹ ಎಲ್ಲರ ಸೇವೆಯನ್ನೂ ಮಾಡುತ್ತೇನೆ. ನನ್ನ ರಕ್ಷಣೆಗೆ ದೇವರು ಇರುತ್ತಾನೆ. ಈ ಕುರಿತು ನಾನು ತಲೆಕೆಡಿಸಿಕೊಳ್ಳಲ್ಲ. ಮನುಷ್ಯರು ಎಲ್ಲರೂ ಒಂದೇ ಅನ್ನೋದು ನನ್ನ ಸೈದ್ಧಾಂತಿಕ ನಿಲುವಾಗಿದೆ. ನಾವು ಅರ್ಜಿ ಹಾಕಿ ಭೂಮಿ ಕೊಟ್ಟಿದವರು ಯಾರೂ ಇಲ್ಲ ಅಂತ ತಿಳಿಸಿದ್ರು.
ನಾನು ಮನುಷ್ಯ ವಿರೋಧಿ ಅಲ್ಲ. ಬದಲಾಗಿ ಅವರನ್ನು ಪ್ರೀತಿಸುತ್ತೇನೆ. ಹೀಗಾಗಿ ಅವರ ಆಶೀರ್ವಾದವೇ ನನಗೆ ರಕ್ಷಣೆ. ನನ್ನನ್ನು ಯಾರೂ ಕೂಡ ಜಾತಿವಾದಿ ಮತ್ತು ಮತೀಯವಾದಿ ಎಂದು ಟೀಕಾಕಾರರು ಕೂಡ ಹೇಳಿಲ್ಲ. ಒಟ್ಟಿನಲ್ಲಿ ಆಸ್ತಿಕವಾಗಿ ಒಬ್ಬ ಮನಷ್ಯ ಹೇಗಿರಬೇಕೋ ಹಾಗೆಯೇ ನಾನಿದ್ದೇನೆ ಅಂತ ರೈ ಹೇಳಿದ್ರು. ಇದನ್ನೂ ಓದಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ: ಶಂಕಿತ ಆರೋಪಿಯನ್ನ ವಶಕ್ಕೆ ಪಡೆದ ಎಸ್ಐಟಿ
ಮಂಗಳೂರಲ್ಲಿ ಇಷ್ಟೊಂದು ಕೊಲೆಗಳಾಗಿವೆ. ಇವುಗಳಲ್ಲಿ ನನ್ನ ಪಾತ್ರವಿಲ್ಲ. ಒಟ್ಟಿನಲ್ಲಿ ನನ್ನ ಹತ್ಯೆಗೆ ಸಂಚು ರೂಪಿಸಿರುವ ಕುರಿತು ನನಗೆ ಯಾವುದೇ ಪೊಲೀಸ್ ಭದ್ರತೆ ಬೇಡ. ಜನರೇ ರಕ್ಷಣೆ ನನಗೆ ಅಂತ ಅವರು ವಿವರಿಸಿದ್ರು.