ಹಾವೇರಿ: ಗಣೇಶ ಚತುರ್ಥಿಯ ಸಂಭ್ರಮದ ಸಮಯದಲ್ಲಿ ಕುರಬಗೇರಿಯ ಪ್ರಾಚಿನ ಕಾಲದ ಬನಶಂಕರಿ ದೇವಸ್ಥಾನಕ್ಕೆ ಬೆಳ್ಳಿ ಗಣಪತಿ ಬಂದಿದೆ.
ರಾಣೇಬೆನ್ನೂರಿನ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆ 11 ಕೆಜಿ ತೂಕದ ರಾಣೇಬೆನ್ನೂರ ಕಾ ರಾಜಾ ಬೆಳ್ಳಿ ಗಣಪತಿಯನ್ನು ದೇವಸ್ಥಾನಕ್ಕೆ ಹಸ್ತಾಂತರ ಮಾಡಿದೆ. ಇದನ್ನೂ ಓದಿ: 400 ಚಿನೂಕ್ ಹೆಲಿಕಾಪ್ಟರ್ಗಳ ಸೇವೆ ದಿಢೀರ್ ಬಂದ್ – ಅಮೆರಿಕದ ಶಾಕಿಂಗ್ ನಿರ್ಧಾರ, ಆತಂಕದಲ್ಲಿ ಭಾರತ
ಸಂಸ್ಥೆಯ ಅಧ್ಯಕ್ಷರಾದ ಪ್ರಕಾಶ ಎಸ್ ಬುರಡಿಕಟ್ಟಿ ಮತ್ತು ಸದಸ್ಯರು ಬೆಳ್ಳಿ ಗಣಪತಿಯನ್ನು ಇಂದು ಬನಶಂಕರಿ ದೇವಸ್ಥಾನದ ಸದಸ್ಯರಾದ ಶಂಕ್ರಪ್ಪ ಬುರಡಿಕಟ್ಟಿ, ಮಂಜುನಾಥ ಗೌಡ, ಶಿವಣ್ಣನವರ, ಶಿವಪ್ಪ ಹೆದ್ದೇರಿ, ನಾಗರಾಜ ಉದಗಟ್ಟಿ, ಬಸವರಾಜ ಕೊಪ್ಪದ ಮತ್ತು ಪದಾಧಿಕಾರಿಗಳಿಗೆ ಹಸ್ತಾಂತರ ಮಾಡಿದರು.