ಹುಬ್ಬಳ್ಳಿ: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ವಿರುದ್ಧ ಮಾಜಿ ಸಚಿವ ಸಂತೋಷ್ ಲಾಡ್ (Santhosh Lad) ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಯಾವ ಕ್ಷೇತ್ರದಲ್ಲಿ ಚುನಾವಣೆ ನಿಲ್ಲೋದೇ ಬೇಡ. ಈ ಬಾರಿ ಅವರು ಚುನಾವಣೆ ನಿಲ್ಲುವ ಅವಶ್ಯಕತೆ ಇಲ್ಲ ಎಂದು ಹೇಳುವ ಮೂಲಕ ಬಾಂಬ್ ಸಿಡಿಸಿದ್ದಾರೆ. ಇದನ್ನೂ ಓದಿ: ಜನರ ಮುಂದೆ ಏಕೆ ರಾಜಕೀಯವಾಗಿ ಬೆತ್ತಲಾಗ್ತೀರಿ – ಕಾಂಗ್ರೆಸ್ಗೆ ಸುಧಾಕರ್ ತಿರುಗೇಟು
ಸಿದ್ದರಾಮಯ್ಯ ಕೇವಲ ಒಂದು ಪಕ್ಷಕ್ಕೆ ಸೀಮಿತವಲ್ಲ, ಅವರು 224 ಕ್ಷೇತ್ರದಲ್ಲಿ ಎಲ್ಲೆ ಸ್ಪರ್ಧೆ ಮಾಡಿದರೂ ಗೆಲ್ಲತ್ತಾರೆ. ಆದರೆ ಅವರು ಈ ಬಾರಿ ಚುನಾವಣೆ ನಿಲ್ಲುವ ಬದಲು ರಾಜ್ಯ ಸುತ್ತಿ ಪಕ್ಷ ಸಂಘಟನೆ ಮಾಡಲಿ. ಹಾಗೂ ಅವರ ವಯಸ್ಸು ಸಹ ಚುನಾವಣೆ ಪ್ರಚಾರಕ್ಕೆ ಅಡ್ಡಿಯಾಗಬದು. ಏಪ್ರಿಲ್ ನಲ್ಲಿ ಬಿಸಿಲು ಜಾಸ್ತಿ ಇದು ಅವರ ಆರೋಗ್ಯ ಮೇಲೆ ಪರಿಣಾಮ ಬಿರುತ್ತದೆ. ಹೀಗಾಗಿ ಅವರು ಚುನಾವಣೆ ನಿಲ್ಲುವ ಬದಲು ಪಕ್ಷ ಸಂಘಟನೆ ಮಾಡಲಿ ಎಂದು ಆಜಿ ಸಚಿವರು ಸಲಹೆ ನೀಡಿದರು.