ಬೆಂಗಳೂರು: ಇಲ್ಲಿನ ಶ್ರೀ ವಿದ್ಯಾಮಾನ್ಯ ವಿದ್ಯಾ ಕೇಂದ್ರದಲ್ಲಿ (Sri Vidyamanya Vidya Kendra) ದಸರಾ ಹಬ್ಬದ (Dasara Festival) ಸೊಬಗು ಕಳೆಗಟ್ಟಿದ್ದು, ಭಾರತೀಯ ಸಂಸ್ಕೃತಿಯೇ ಅಲ್ಲಿ ಅನಾವರಣಗೊಂಡಿದೆ.
ಆಡಳಿತ ಮಂಡಳಿ ಸಹಯೋಗದೊಂದಿಗೆ ಬೋಧಕ ಸಿಬ್ಬಂದಿಯೇ ಆಯೋಜಿಸಿರುವ ಈ ಬೊಂಬೆ ಪ್ರದರ್ಶನದಲ್ಲಿ (Doll Festival) ರಾಮಾಯಣದ ಗತವೈಭವದೊಂದಿಗೆ ಮೈಸೂರಿನ ದಸರಾ (Mysuru Dasara) ಸೊಬಗೇ ಬೊಂಬೆ ಲೋಕದಲ್ಲಿ ಅನಾವರಣಗೊಳಿಸಿದೆ. ಇದನ್ನೂ ಓದಿ: ಕಾಜಿರಂಗ ಉದ್ಯಾನವನದಲ್ಲಿ ಜೀಪ್ ಚಾಲನೆ – ಸದ್ಗುರು, ಹಿಮಂತ ಬಿಸ್ವಾ ಶರ್ಮಾ ವಿರುದ್ಧ FIR
ಏನೇನು ವಿಶೇಷತೆ?
ಸಂಪೂರ್ಣ ರಾಮಾಯಣ ದೃಶ್ಯಗಳಾದ ರಾಮನ ಹುಟ್ಟು, ವನವಾಸ, ಶ್ರೀರಾಮನ ಪಟ್ಟಾಭಿಷೇಕ, ಲವಕುಶರ ಜನನ, ಲವಕುಶರ ಪಟ್ಟಾಭೀಷೇಕ, ಮೈಸೂರು ದಸರಾ ಜಂಬೂ ಸವಾರಿ ಗೊಂಬೆಗಳು, ಶ್ರೀ ಕೃಷ್ಣ ಲೀಲಾ, ನವದುರ್ಗೆಯರು, ಮದುವೆ ಮಂಟಪ, ಚೆನ್ನಪಟ್ಟಣದ ಬೊಂಬೆಗಳು, ಪಟ್ಟದ ಬೊಂಬೆಗಳು, ತೋಪುಗಳು, ಕಾಮದೇನು, ಹಳ್ಳಿಗಾಡು ಸೇರಿದಂತೆ ಅನೇಕ ಪ್ರಕಾರದ ಬೊಂಬೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿದ್ದು, ನೋಡುಗರನ್ನು ಕೈಬೀಸಿ ಕರೆಯುತ್ತಿದೆ. ಇದನ್ನೂ ಓದಿ: ರಷ್ಯಾದ ಶಾಲೆಯಲ್ಲಿ ಮನಸ್ಸೋಇಚ್ಛೆ ಗುಂಡು ಹಾರಿಸಿದ ಬಂದೂಕುಧಾರಿ- 5 ಮಕ್ಕಳು ಸೇರಿ 9 ಮಂದಿ ದುರ್ಮರಣ
ಕಳೆದ 7 ವರ್ಷಗಳಿಂದಲೂ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ದಸರಾ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ. ಹಾಗೆಯೇ ಈ ಬಾರಿ ಸಂಪೂರ್ಣ ರಾಮಾಯಣ (Sri Ramayana), ಕೃಷ್ಣ ಲೀಲೆ, ಮಹಾಭಾರತದ ಸನ್ನಿವೇಷಗಳು, ಪೂರಿ ಜಗನ್ನಾಥ ರಥಯಾತ್ರೆ, ಮೈಸೂರು ದಸರಾ ಪ್ರದರ್ಶನದ ದೃಶ್ಯಗಳನ್ನು ಬೊಂಬೆ ಲೋಕದಲ್ಲಿ ಕಟ್ಟಿಕೊಟ್ಟಿದ್ದೇವೆ. ನಾಡ ಹಬ್ಬವನ್ನು ಉಳಿಸುವುದು ನಮ್ಮ ಸಂಸ್ಕೃತಿ ಹಾಗೂ ಜವಾಬ್ದಾರಿಯಾಗಿದೆ. ನಾವೆಲ್ಲರೂ ಒಟ್ಟಾಗಿ ದಸರಾ ಸಂಭ್ರಮಿಸೋಣ ಎಂದು ಪ್ರಾಂಶುಪಾಲರಾದ ಶಾರದಾ ಮನವಿ ಮಾಡಿದ್ದಾರೆ.
ಬೊಂಬೆ ಪ್ರರ್ದಶನ ಇಂದಿನಿಂದ ಶುರುವಾಗಿದ್ದು, ಅಕ್ಟೋಬರ್ 5ರ ವರೆಗೂ ನಡೆಯಲಿದೆ. ಪ್ರತಿದಿನ ಬೆಳಗ್ಗೆ 9.30 ರಿಂದ ಸಂಜೆ 6.30ರ ವರೆಗೆ ವೀಕ್ಷಿಸಬಹುದಾಗಿದೆ.