Notice: Trying to get property 'end' of non-object in /home/writemenmedia/public_html/writmen/wp-content/themes/jnews/class/ContentTag.php on line 36
ಧಾರವಾಡ: ಕಾಂಗ್ರೆಸ್ ಬಿಟ್ಟು ಹೋದವರೆಲ್ಲಾ ಮುಂದೆ ಪಶ್ಚಾತಾಪ ಪಡುತ್ತಾರೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.
ಇಂದು ಧಾರವಾಡದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನಿಂದ ಹೋದ ಎಚ್. ವಿಶ್ವನಾಥ್ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ. ಎಚ್. ವಿಶ್ವನಾಥ್ ಕಾಂಗ್ರೆಸ್ ಬಿಟ್ಟು ಹೋಗಿದ್ದೇ ತಪ್ಪು ಹೆಜ್ಜೆ. ಕಾಂಗ್ರೆಸ್ನಿಂದ ಯಾರು ಹೊರಗೆ ಹೋಗುತ್ತಾರೋ ಅವರು ಮುಂಬರುವ ದಿನಗಳಲ್ಲಿ ಪಶ್ಚಾತ್ತಾಪ ಪಡುತ್ತಾರೆ ಎಂದು ಹೇಳಿದರು.
ಮಹದಾಯಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪಕ್ಷದ ಮಾತು ಕೇಳುವುದಿಲ್ಲ, ಅವರ ಮಾತು ಕೇಳುವುದಿಲ್ಲ, ಇವರ ಮಾತು ಕೇಳುವುದಿಲ್ಲ ಅಂತಾರೆ, ಯಾರ ಮಾತನ್ನು ಕೇಳಬೇಕಾಗಿಲ್ಲ, ಸುಪ್ರಿಂ ಕೋರ್ಟ್ ಮಾತನ್ನಾದರೂ ಕೇಳುತ್ತಿರೋ, ಇಲ್ಲವೋ? ಎಂದು ಗೋವಾ ಸಿಎಂ ವಿರುದ್ಧ ಕಿಡಿಕಾರಿದರು.
ಮಹದಾಯಿ ವಿಚಾರದಲ್ಲಿ ಈಗಾಗಲೇ ತೀರ್ಪು ಬಂದಿದೆ. ಅದು ಈಗ ಮುಗಿದ ಅಧ್ಯಾಯ. ಈಗ ಅನುಷ್ಠಾನದತ್ತ ಗಂಭೀರ ಹೆಜ್ಜೆ ಹಾಕಬೇಕಿದೆ. ಮಹದಾಯಿ ಕೆಲಸ ಪೂರ್ಣಗೊಳಿಸುವತ್ತಾ ಸರ್ಕಾರ ಲಕ್ಷ್ಯ ವಹಿಸಬೇಕು. ಬರೇ ಮಾತುಕತೆ, ಹೇಳಿಕೆಗಳು ಯಾವುದಕ್ಕೆ? ಗೋವಾ ಸಿಎಂ ಈ ರೀತಿ ಹೇಳಿರುವುದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಹದ್ದು, ಇದು ಬೇಜವಾಬ್ದಾರಿ ಹೇಳಿಕೆ ಎಂದು ವಾಗ್ದಾಳಿ ನಡೆಸಿದರು.