ಬೆಂಗಳೂರು: ಅತ್ತೆಯನ್ನೇ ಕೊಲ್ಲಲು ಸೊಸೆಯೊಬ್ಬಳು ಖತರ್ನಾಕ್ ಪ್ಲಾನ್ ರೂಪಿಸಿ ವಿಫಲವಾಗಿರುವ ಘಟನೆ ನಡೆದಿರುವ ಬಗ್ಗೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.
ಊಟದಲ್ಲಿ ನಿದ್ರೆ ಮಾತ್ರೆ, ಜಿರಳೆ ಔಷಧಿ ಹಾಕಿ ಕೊಲ್ಲಲು ಸೊಸೆ ಯೋಜನೆ ಹಾಕಿದ್ದಳು. ಆದರೆ ಸೊಸೆ ಮಾಡಿದ್ದ ಅಡುಗೆ ತಿಂದು ಆಸೀಫ್ ಕುಟುಂಬ ಅಸ್ವಸ್ಥವಾಗಿದೆ. ಈ ಹಿನ್ನೆಲೆಯಲ್ಲಿ ಪತ್ನಿ ಆಯಿಷಾ ವಿರುದ್ಧ ಪತಿ ಆಸೀಫ್ ಖಾನ್ ದೂರು ಕೊಟ್ಟಿದ್ದಾರೆ. ಇದನ್ನೂ ಓದಿ: 5 ತಿಂಗಳ ಗರ್ಭಿಣಿ ಪತ್ನಿಯನ್ನು ನೀರಿನಲ್ಲಿ ಮುಳುಗಿಸಿ ಕೊಂದ ಪತಿ
ಆಯೀಷಾ ತನ್ನ ತಾಯಿ ಜೊತೆ ಮಾತಾಡಿರುವ ಆಡಿಯೋದಲ್ಲಿ ಸತ್ಯ ಬಯಲಾಗಿದೆ. ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ನಿ ಆಯೀಷಾ, ಹುಸೇನ್ ಸಾಬ್, ಕಮರ್ ರಾಜ್ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಇದನ್ನೂ ಓದಿ: 7 ಎಕರೆ ಆಸ್ತಿಗಾಗಿ 98 ವರ್ಷದ ವೃದ್ಧೆಯನ್ನೇ ಕಿಡ್ನಾಪ್ಗೈದ್ರು
ಸೊಸೆ ಫ್ಲ್ಯಾನ್ ಆಡಿಯೋ:
ಆಯೀಷಾ:- ಮೆಡಿಕಲ್ ಸ್ಟೋರ್ನಲ್ಲಿ ನಿದ್ರೆ ಮಾತ್ರೆಗಳನ್ನು ತನ್ನಿ
ಆಯೀಷಾ ತಾಯಿ:- ಹಾ.. ಸರಿ
ಆಯೀಷಾ:- ಅವರಿಗೆಲ್ಲಾ ನಿದ್ದೆ ಮಾತ್ರೆ ಹಾಕಿ.. ನನ್ನ ವಿರುದ್ಧ ಇರುವ ರಿಪೋರ್ಟ್ಗಳನ್ನು ಸುಟ್ಟು ಹಾಕ್ತೀನಿ
ಆಯೀಷಾ ತಾಯಿ:- ಹಾ.. ಸರಿ ಹಾಗೇ ಮಾಡು
ಆಯೀಷಾ:- ಈ ಕೆಲಸವನ್ನು ನಾವು ಮಾಡೋಣ.. ಸರೀನಾ…?
ಆಯೀಷಾ ತಾಯಿ:- ಹಾ.. ಸರಿ..