ಲಕ್ನೋ: 10ನೇ ತರಗತಿಯ ದಲಿತ ವಿದ್ಯಾರ್ಥಿಯನ್ನು ಥಳಿಸಿ ವ್ಯಕ್ತಿಯೊಬ್ಬನು ಪಾದ ನೆಕ್ಕುಲು ಹೇಳುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಹಿನ್ನೆಲೆ 8 ಮಂದಿಯನ್ನು ಪೊಲೀರು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಏಪ್ರಿಲ್ 10 ರಂದು, ಜಗತ್ಪುರ ಪಟ್ಟಣದ ನಿವಾಸಿಯಾದ ದಲಿತ ಹುಡುಗನನ್ನು ಅವನ ಸ್ನೇಹಿತ ಬೈಕ್ನಲ್ಲಿ ರಾಮಲೀಲಾ ಮೈದಾನಕ್ಕೆ ಕರೆದೊಯ್ದನು. ನಂತರ ಆತನನ್ನು ಸಲೂನ್ ರಸ್ತೆಯ ಕಡೆಗೆ ಕರೆದೊಯ್ದ ಅಲ್ಲಿಂದ ಕೆಲವು ಯುವಕರು ತೋಟಕ್ಕೆ ಕರೆದೊಯ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸಂತೋಷ್ ಪಾಟೀಲ್ ಕುಟುಂಬಕ್ಕೆ 5 ಲಕ್ಷ ರೂ. ನೀಡುವ ಭರವಸೆ ಕೊಟ್ಟ ಕಾಂಗ್ರೆಸ್ ಶಾಸಕ
ಆರೋಪಿಗಳು ಹುಡುಗನನ್ನು ತೋಟದಲ್ಲಿ ಥಳಿಸಿ ಆರೋಪಿಗಳಲ್ಲಿ ಒಬ್ಬನ ಪಾದ ನೆಕ್ಕಲು ಒತ್ತಾಯಿಸಿದ್ದಾರೆ. ಈ ವೀಡಿಯೋವನ್ನು ಫೋನ್ನಲ್ಲಿ ಸೆರೆಹಿಡಿಯಲಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವೀಡಿಯೋ ವೈರಲ್ ಆದ ನಂತರ, ಬಾಲಕ ತನ್ನ ತಾಯಿಯೊಂದಿಗೆ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಎಂದು ಹೇಳಿದ್ದಾರೆ.
ಹುಡುಗನ ಮೇಲೆ ಏಕೆ ಹಲ್ಲೆ ನಡೆದಿದೆ ಎಂಬುದಕ್ಕೆ ಪೊಲೀಸರು ಸ್ಪಷ್ಟನೆ ನೀಡಿಲ್ಲ. ಇದಕ್ಕೆ ಸಂಬಂಧಿಸಿದಂತೆ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದೂರು ದಾಖಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಎಂಟು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಡಾಲ್ಮೌ ಸರ್ಕಲ್ ಅಧಿಕಾರಿ(ಸಿಒ) ಅಶೋಕ್ ಸಿಂಗ್ ಮಾಹಿತಿ ಕೊಟ್ಟಿದ್ದಾರೆ. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಜನರ ಮುಂದೆ ಎಲ್ಲ ಬಿಚ್ಚಿಟ್ಟಿದ್ದಾರೆ, ಇದನ್ನು ಬಿಚ್ಚಿಡಲಿ: ಡಿಕೆಶಿ