ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಭೇಟಿ ಮಾಡಲು ಬರುವವರಿಗೆ ಮತ್ತು ಸಿಎಂ ನಿವಾಸದಲ್ಲಿ ಕೆಲಸ ಮಾಡವ ಸಿಬ್ಬಂದಿಗೆ ಕೆಲ ಮಾರ್ಗ ಸೂಚಿಗಳನ್ನ ಹೊರಡಿಸಲಾಗಿದೆ. ಸಿಎಂ ಭೇಟಿ ಮಾಡಬೇಕಾದರೆ ಅಥವಾ ಅವರ ಮನೆ ಪ್ರವೇಶಿಸಬೇಕಾದರೆ ಕೆಲವೊಂದು ನಿಯಮಗಳನ್ನ ಪಾಲಿಸಲೇ ಬೇಕಾಗಿದೆ.
ನಿಯಮಗಳೇನು?:
* ಯಾವುದೇ ವ್ಯಕ್ತಿ, ರಾಜಕೀಯ ವ್ಯಕ್ತಿ, ಪಕ್ಷದ ಕಾರ್ಯಕರ್ತರಿಗೆ ಶೀತ, ಜ್ವರ ಕೆಮ್ಮು ಮತ್ತು ಉಸಿರಾಟದ ತೊಂದರೆ ಇದ್ದರೆ ಅವರಿಗೆ ಸಿಎಂ ಭೇಟಿ ಮಾಡಲು ಅವಕಾಶ ಇಲ್ಲ. ಈ ಮೇಲಿನ ಯಾವುದೇ ಲಕ್ಷಣಗಳು ಸಿಎಂ ಮನೆಯಲ್ಲಿ ಕಾರ್ಯ ನಿರ್ವಹಿಸುತ್ತಿವ ಸಿಬ್ಬಂದಿಗೆ ಕಂಡುಬಂದಲ್ಲಿ ಅವರನ್ನು ಕೂಡಲೇ ರಜೆ ಮೇಲೆ ಕಳುಹಿಸಿ, ಆ ಜಾಗಕ್ಕೆ ಬೇರೆಯವರನ್ನು ನಿಯೋಜಿಸಲಾಗುತ್ತದೆ.
* ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಪ್ರವೇಶ ದ್ವಾರ ಮತ್ತು ಜನ ಸಂದಣೆ ಇರುವ ಕಡೆ ಇರಿಸುವುದು. ಮನೆ ಒಳಗೆ ಹೋಗುವ ಪ್ರತಿಯೊಬ್ಬರೂ ತಮ್ಮ ಕೈಗಳನ್ನು ಹ್ಯಾಂಡ್ ಸ್ಯಾನಿಟೈಸರ್ ನಿಂದ ಸ್ವಚ್ಛ ಮಾಡಿ ಬಳಿಕ ಒಳಗೆ ಹೋಗಬೇಕು.
* ಮನೆ ಒಳಗೆ ಹೆಚ್ಚು ಜನ ಸಂದಣಿ ಆಗದಂತೆ ನೋಡಿಕೊಳ್ಳುವುದು. ಭೇಟಿ ಅನಿವಾರ್ಯ ಆದಲ್ಲಿ ಒಬ್ಬಬ್ಬರಿಗೆ ಮಾತ್ರ ಅವಕಾಶ ಮಾಡಿ ಕೊಡುವುದು.
* ಮನೆ ಫ್ಲೋರ್ ಗಳನ್ನು ಆಗಾಗ ಡಿಟರ್ಜೆಂಟ್ ನಿಂದ ಸ್ವಚ್ಛ ಗೊಳಿಸುವುದು. ಮನೆ ಪೀಠೋಪಕರಣಗಳನ್ನು ಕೂಡ ಸೋಡಿಯಂ ಹೈಪೊಕ್ಲರೈಡ್ ನಿಂದ ಆಗಾಗ ಸ್ವಚ್ಛಗೊಳಿಸುವುದು.
* ಯಾವುದೇ ವಿದೇಶದ ಡೆಲಿಗೆಟ್ಸ್ ಗಳು ಬಂದರೂ ಅವರು ಮಾಸ್ಕ್ ಧರಿಸಿದ ನಂತರವೇ ಸಿಎಂ ಭೇಟಿಗೆ ಅವಕಾಶ ನೀಡಲಾಗುವುದು. ಹೀಗೆ ಕೊರೊನಾ ಎಫೆಕ್ಟ್ ನಿಂದಾಗಿ ಸಿಎಂ ಭೇಟಿಗೆ ಮಾರ್ಗಸೂಚಿಗಳನ್ನ ನಿಗದಿಪಡಿಸಲಾಗಿದೆ.