ಸೋಷಿಯಲ್ ಮೀಡಿಯಾದಲ್ಲಿ ದಿನದಿಂದ ದಿನಕ್ಕೆ ಹೈಪ್ ಕ್ರಿಯೇಟ್ ಮಾಡಿರುವ ಕಲಾವಿದ ಅಂದ್ರೆ ಕಾಫಿನಾಡು ಚಂದು. ಬರ್ತ್ಡೇ ವಿಶ್ ಮೂಲಕ ಅನೇಕ ಅಭಿಮಾನಿಗಳ ಮನಗೆದ್ದಿದ್ದಾರೆ. ಇದೀಗ ರಾಜಕೀಯಕ್ಕೆ ಸೇರಿ ಅಂತಾ ಬಿಟ್ಟಿ ಸಲಹೆ ನೀಡಿದವರಿಗೆ ಕಾಫಿನಾಡು ಚಂದು ಖಡಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
View this post on Instagram
ಇಂಟರ್ನೆಟ್ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಕಾಫಿನಾಡು ಚಂದುಗೆ ರಾಜಕೀಯಕ್ಕೆ ಬರುವಂತೆ ಕೆಲವರು ಬಿಟ್ಟಿ ಸಲಹೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಚಂದು ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ನೀವು ರಾಜಕೀಯಕ್ಕೆ ನಿಂತುಕೊಳ್ಳಬಹುದಲ್ಲ ಅಂತ ಯಾರೋ ಒಬ್ಬರು ಹೇಳಿದ್ರು. ನನಗೆ ಅದರಲ್ಲಿ ಆಸಕ್ತಿ ಇಲ್ಲ. ಯಾಕೆಂದರೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಿವೆ. ಓಹೋ ಚಂದು ಕಾಂಗ್ರೆಸ್ಗೆ ನಿಂತುಕೊಂಡು, ಬಿಜೆಪಿಗೆ ನಿಂತುಕೊಂಡ ಅಂತ ಜನರು ಹೇಳೋದು ಬೇಡ. ನನಗೆ ಈಗ ಇರುವ ಲೈಫ್ ತುಂಬಾ ಚೆನ್ನಾಗಿದೆ. ಇದನ್ನೂ ಓದಿ:ಶಿವಣ್ಣನ ಮನೆಗೆ ಭೇಟಿ ನೀಡಿದ `ಸತ್ಯ ಇನ್ ಲವ್’ ಚಿತ್ರದ ನಾಯಕಿ ಜೆನಿಲಿಯಾ
View this post on Instagram
ಇನ್ನು ರಾಜಕೀಯದ ಬಗ್ಗೆ ಮಾತಾಡೋಕೆ ನಾನು ರಾಜಕಾರಣಿ ಅಲ್ಲ. ದೇವಸ್ಥಾನದ ಬಗ್ಗೆ ಮಾತಾಡೋಕೆ ಪೂಜಾರಿನೂ ಅಲ್ಲ. ಪಾಠ ಮಾಡೋಕೆ ನಾನು ಮೇಷ್ಟ್ರು ಅಲ್ಲ. ನಾನು ಪುನೀತಣ್ಣ, ಶಿವಣ್ಣ ಅವರ ಅಭಿಮಾನಿ ಎಂದು ಚಂದು ಹೇಳಿರುವ ವಿಡಿಯೋ ವೈರಲ್ ಆಗಿದೆ. ಇನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಕಾಫಿನಾಡು ಚಂದು ಮೇಲಿನ ಕ್ರೇಜ್ ಹೆಚ್ಚಾಗಿದೆ. 4 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದ್ದಾರೆ.