Public TV
No Result
View All Result
  • LIVE TV
  • Latest
  • Karnataka
  • Districts
    • All
    • Bagalkot
    • Belgaum
    • Bellary
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
    ನೀನು ಶರ್ಟ್ ಬಿಚ್ಚಿ ಪ್ರತಿಭಟಿಸಿದ್ರೆ ಪವರ್‌ಫುಲ್ ಆಗಿರುತ್ತೆ- ಸಂಗಮೇಶ್‍ಗೆ ಐಡಿಯಾ ಕೊಟ್ಟಿದ್ದೇ ಜಮೀರ್..!

    ನೀನು ಶರ್ಟ್ ಬಿಚ್ಚಿ ಪ್ರತಿಭಟಿಸಿದ್ರೆ ಪವರ್‌ಫುಲ್ ಆಗಿರುತ್ತೆ- ಸಂಗಮೇಶ್‍ಗೆ ಐಡಿಯಾ ಕೊಟ್ಟಿದ್ದೇ ಜಮೀರ್..!

    ಸಾಹುಕಾರನ ರಾಸಲೀಲೆ ಔಟ್- ಸಂತ್ರಸ್ತೆಯ ಹೇಳಿಕೆಯ ನಂತ್ರವಷ್ಟೇ ಎಫ್‍ಐಆರ್

    ನಾಳೆ ಬೆಳಗ್ಗೆ 10.30ಕ್ಕೆ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ

    ಕಾಶಿ ವಿಶ್ವೇಶ್ವರ ಸ್ವಾಮಿ ದರ್ಶನ ಪಡೆದ ಕಿಚ್ಚ ಸುದೀಪ್

    ಕಾಶಿ ವಿಶ್ವೇಶ್ವರ ಸ್ವಾಮಿ ದರ್ಶನ ಪಡೆದ ಕಿಚ್ಚ ಸುದೀಪ್

    ಮರಿ ಮೃತಪಟ್ಟು ಹಲವು ದಿನಗಳೇ ಕಳೆದ್ರೂ, ಮಡಿಲಲ್ಲೇ ಹೊತ್ತು ತಿರುಗುತ್ತಿದ್ದಾಳೆ ತಾಯಿ

    ಮರಿ ಮೃತಪಟ್ಟು ಹಲವು ದಿನಗಳೇ ಕಳೆದ್ರೂ, ಮಡಿಲಲ್ಲೇ ಹೊತ್ತು ತಿರುಗುತ್ತಿದ್ದಾಳೆ ತಾಯಿ

    ದೇಶದಲ್ಲಿ 86 ಸಾವಿರ ಮಂದಿಗೆ ಕೊರೊನಾ- ಸೋಂಕಿತರ ಸಂಖ್ಯೆ 58 ಲಕ್ಷಕ್ಕೆ ಏರಿಕೆ

    ಇಂದು 436 ಕೇಸ್ ಪತ್ತೆ- 478 ಜನ ಡಿಸ್ಚಾರ್ಜ್, 5 ಸಾವು

    ಬಜೆಟ್ ಬಳಿಕ ಮದ್ವೆ ಮನೆಯಲ್ಲಿ ಸಿದ್ದು, ಬಿಸ್‍ವೈ ನಡುವೆ ಹಾಸ್ಯ ಚಟಾಕಿ

    ಬಜೆಟ್ ಬಳಿಕ ಮದ್ವೆ ಮನೆಯಲ್ಲಿ ಸಿದ್ದು, ಬಿಸ್‍ವೈ ನಡುವೆ ಹಾಸ್ಯ ಚಟಾಕಿ

    ಜಿಲ್ಲೆಗೊಂದು ಗೋಶಾಲೆ ಘೋಷಣೆ ಮಾಡಿರುವುದು ಸಂತಸ ತಂದಿದೆ, ಸಿಎಂಗೆ ಧನ್ಯವಾದ: ಪೇಜಾವರ ಶ್ರೀ

    ಜಿಲ್ಲೆಗೊಂದು ಗೋಶಾಲೆ ಘೋಷಣೆ ಮಾಡಿರುವುದು ಸಂತಸ ತಂದಿದೆ, ಸಿಎಂಗೆ ಧನ್ಯವಾದ: ಪೇಜಾವರ ಶ್ರೀ

    Auto Draft

    ಯುಡಿಯೂರಪ್ಪ ಬಜೆಟ್‌ – ಯಾವ ಜಿಲ್ಲೆಗೆ ಏನು ಸಿಕ್ಕಿದೆ? ಇಲ್ಲಿದೆ ವಿವರ

    ರಾಜ್ಯ ಬಜೆಟ್‍ನಲ್ಲಿ ಶಿವಮೊಗ್ಗ, ರಾಮನಗರಕ್ಕೆ ಸಿಕ್ಕಿದ್ದೇನು..?

    ರಾಜ್ಯ ಬಜೆಟ್‍ನಲ್ಲಿ ಶಿವಮೊಗ್ಗ, ರಾಮನಗರಕ್ಕೆ ಸಿಕ್ಕಿದ್ದೇನು..?

    ಯಲ್ಲಾಪುರದಲ್ಲಿ ಗುಡ್ಡ ಕುಸಿದು ನಾಲ್ವರು ಕೂಲಿ ಕಾರ್ಮಿಕರು ಸಾವು

    ಯಲ್ಲಾಪುರದಲ್ಲಿ ಗುಡ್ಡ ಕುಸಿದು ನಾಲ್ವರು ಕೂಲಿ ಕಾರ್ಮಿಕರು ಸಾವು

    ಅಮ್ಮನ ಅಕ್ರಮ ಸಂಬಂಧದಿಂದ ಬೇಸತ್ತು ಮಗಳು ಆತ್ಮಹತ್ಯೆ

    ಅಮ್ಮನ ಅಕ್ರಮ ಸಂಬಂಧದಿಂದ ಬೇಸತ್ತು ಮಗಳು ಆತ್ಮಹತ್ಯೆ

    ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಕಾಂಗ್ರೆಸ್ಸಿಗೆ ಸೇರ್ಪಡೆ

    ಬಜೆಟ್‌ನಲ್ಲಿ ಲಾಲಿಪಾಪ್, ಸಿಎಂ ರಾಜ್ಯದ ಮಹಿಳೆಯರಲ್ಲಿ ಕ್ಷಮೆ ಕೇಳಲಿ- ರಮೇಶ್‌ ಬಾಬು

    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • International
  • Crime
  • Cinema
  • Sports
  • Tech
  • Automobile
  • Videos
  • SSLC HELP
Public TV

ಶಿಕ್ಷಕರ ಕೈಯಲ್ಲಿ ಅರಳಿದ ಚಿತ್ತಾರ- ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಚಿತ್ರಣವೇ ಬದಲು

Public Tv by Public Tv
2 months ago
Reading Time: 1min read
ಶಿಕ್ಷಕರ ಕೈಯಲ್ಲಿ ಅರಳಿದ ಚಿತ್ತಾರ- ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಚಿತ್ರಣವೇ ಬದಲು

ಕಾರವಾರ: ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ವಿದ್ಯಾರ್ಥಿಯ ಬದುಕೇ ಬದಲಾಗುತ್ತದೆ. ಶಿಕ್ಷಕನ ಪಾತ್ರ ಅಂತಹ ಮಹತ್ವದ್ದಾಗಿದೆ. ಆದರೆ ಶಿಕ್ಷಣಾಧಿಕಾರಿ  ಕಚೇರಿಗಳು ಮಾತ್ರ ಹಾಳು ಕೊಂಪೆಯಂತೆ ಇರುವುದು ನಮ್ಮ ಅಧಿಕಾರಿಗಳ ನಿರ್ಲಕ್ಷಕ್ಕೆ ಕೈಗನ್ನಡಿಯಾಗಿದೆ. ಇದೀಗ ಶಿಕ್ಷಕರ ಕೈಚಳಕದಿಂದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಚಿತ್ರಣವೇ ಬದಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಶಿಕ್ಷಕರು ತಮ್ಮ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಹೋಗಲು ಹೆದರುವಂತಿತ್ತು. ಬಣ್ಣವಿಲ್ಲದ ಗೋಡೆಗಳು, ಜೋತು ಬಿದ್ದ ಕಿಟಕಿಗಳು, ಕಚೇರಿಯಲ್ಲಿ ಎಲ್ಲಿ ಬೇಕೆಂದರಲ್ಲಿ ಬಿದ್ದಿರುತ್ತಿದ್ದ ಕಡತಗಳು, ಕಚೇರಿಯ ಆವರಣದ ತುಂಬ ತುಂಬಿದ ಮಟ್ಟಿಗಳು ಹೀಗೆ ಸ್ಮಷಾನದಲ್ಲಿ ನೇತು ಹಾಕಿದ ದೃಷ್ಟಿ ಗೊಂಬೆಯಂತೆ ಗೋಚರಿಸುತಿತ್ತು. ಆದರೆ ಇತ್ತೀಚೆಗೆ ವರ್ಗವಾಗಿ ಬಂದ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ್ ಮೊಗೇರ್ ಅವರು ತಮ್ಮ ಕಚೇರಿಯನ್ನು ಬದಲಿಸುವ ಪ್ರಯತ್ನಕ್ಕೆ ಕೈ ಹಾಕಿದರು. ಇದಕ್ಕೆ ಶಿಕ್ಷಕರ ಸಂಘ ಸಹ ಸಹಕಾರ ನೀಡಿತು.

ಸರ್ಕಾರದ ಅನುದಾನವಿಲ್ಲ, ದಾನಿಗಳ ಸಹಕಾರದಲ್ಲಿ ಕೇವಲ ಸುಣ್ಣ ಬಣ್ಣ ಮಾಡಿ ಬಿಟ್ಟರೆ ಸಾಕಾಗದು, ಇಡೀ ಜಿಲ್ಲೆಗೆ ಮಾದರಿಯಾಗಬೇಕು ಎಂಬ ಹಂಬಲದಿಂದ ಲಾಕ್‍ಡೌನ್ ಸಂದರ್ಭದಲ್ಲಿ ಕಾಲಿ ಕುಳಿತಿದ್ದ ತಮ್ಮ ಕ್ಷೇತ್ರದ ಪ್ರೌಢ ಶಾಲಾ ಚಿತ್ರಕಲಾ ಶಿಕ್ಷರನ್ನು ಕರೆಸಿ ಈ ಕುರಿತು ವಿಚಾರ ವಿನಿಮಯ ಮಾಡಿಕೊಂಡರು. ಚಿತ್ರಕಲಾ ಶಿಕ್ಷಕರಾದ ಸಂಜಯ್ ಗುಡಿಗಾರ್, ಮಹೇಶ್ ನಾಯ್ಕ, ನಾರಾಯಣ ಮೊಗೇರ, ಸಾದಿಕ್ ಶೇಖ್, ಮಂಜುನಾಥ ದೇವಾಡಿಗ, ಚನ್ನವೀರ ಹೊಸಮುನಿ ಅವರ ತಂಡ ಕೇವಲ ಕೆಂಪು ಮತ್ತು ಬಿಳಿಯ ಬಣ್ಣವನ್ನು ಬಳಸಿ ಇಡೀ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಕಂಗೊಳಿಸುವಂತೆ ಮಾಡಿದೆ.

ಜಿಲ್ಲೆಯ ಸಂಪ್ರದಾಯಿಕ ಜನಪದ ಕಲೆ ವರ್ಲಿ ಮತ್ತು ಕಾಲ್ಪನಿಕ ಚಿತ್ರಗಳು ಬಿರುಕು ತುಂಬಿದ್ದ ಗೋಡೆಗಳನ್ನು ಕಳೆಗಟ್ಟಿಸಿದೆ. ಹತ್ತು ದಿನಗಳ ಕಾಲ ಪ್ರೌಢಶಾಲಾ ಚಿತ್ರಕಲಾ ಶಿಕ್ಷಕರು ಯಾವುದೇ ಅಪೇಕ್ಷೆ ಇಲ್ಲದೆ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಸುಂದರವಾಗಿಸಿದ್ದಾರೆ. ಸರ್ಕಾರದ ಅನುದಾನ ಬೇಡದ ಶಿಕ್ಷಕರ ಸಂಘ ಬಣ್ಣ ನೀಡಿ ಬೆಳಕಾಗುವಂತೆ ಮಾಡಲಾಗಿದೆ. ಕಚೇರಿಯ ಒಳಗೆ ಶಿಕ್ಷಕ ಸದಾಶಿವ ದೇಶಭಂಡಾರಿಯವರು ತಮ್ಮ ಸ್ವಂತ ಖರ್ಚಿನಲ್ಲಿ ಸುಂದರಗೊಳಿಸಿದ್ದಾರೆ.

ಕಚೇರಿಯ ಒಳ ಗೇಟನ್ನು ಪ್ರವೇಶಿಸುತಿದ್ದಂತೆ ಶಿಕ್ಷಣವೇ ಜೀವನ, ಜಿವನವೇ ಶಿಕ್ಷಣ ಎಂಬ ಉಕ್ತಿ ಸ್ವಾಗತಿಸುತ್ತದೆ. ಗೋಡೆಗಳಲ್ಲಿ ಯೋಗ ಮುದ್ರೆಗಳು, ಅಕ್ಷರ ದಾಸೋಹ, ನಾಡಹಬ್ಬ ಮುಂತಾದ ಚಿತ್ರಗಳು ಬರುವ ಜನರ ಮನಸ್ಸನ್ನು ಕದಿಯದೇ ಇರದು. ಸರ್ಕಾರಿ ಕಚೇರಿ ಎಂದರೆ ಸರ್ಕಾರವೇ ಎಲ್ಲ ಮಾಡಬೇಕು ಎಂಬ ಧೋರಣೆ ಹೊಂದಿದ ಈ ದಿನಗಳಲ್ಲಿ ಯಾವ ಪ್ರತಿಫಲ ಹಂಬಲವಿಲ್ಲದೇ ಸರ್ಕಾರಿ ಕಚೇರಿಯನ್ನು ಬದಲಿಸಿದ ಈ ಶಿಕ್ಷಕರು ಸಮಾಜಕ್ಕೆ ಮಾದರಿಯಾಗಿದ್ದಾರೆ.

Tags: BEO OfficekarwarPaintingPublic TVteachersಕಾರವಾರಪಬ್ಲಿಕ್ ಟಿವಿಬಿಇಒ ಕಚೇರಿಶಿಕ್ಷಕರು
  • Privacy Policy
  • Terms of Service

© 2021 Public TV

No Result
View All Result
  • LIVE TV
  • Latest
  • Karnataka
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • International
  • Crime
  • Cinema
  • Sports
  • Tech
  • Automobile
  • Videos
  • SSLC HELP

© 2021 Public TV