ಸರಿಗಮಪ ರಿಯಾಲಿಟಿ ಶೋಗೆ ಮಹಾಗುರು ಎಂಟ್ರಿನಲ್ಲಿಯೇ ಸಂಚಲನ ಮೂಡಿಸುತ್ತಿದೆ ನ್ಯೂ ವರ್ಷನ್ ಸಾಂಗ್

Public TV
1 Min Read

ಬೆಂಗಳೂರು: ಸಂಗೀತ ಪ್ರತಿಭೆಯನ್ನು ಗುರುತಿಸುವ ಜೀ ಕನ್ನಡ ವಾಹಿನಿಯ ಜೂನಿಯರ್. ಸರಿಗಮಪ ರಿಯಾಲಿಟಿ ಶೋ ಇಂದಿನಿಂದ ಪ್ರಾರಂಭವಾಗಲಿದೆ. ಈ ಬಾರಿ  ನಾದ ಬ್ರಹ್ಮ ಹಂಸಲೇಖ ಮಹಾಗುರುಗಳಾಗಿ ನವ ಪ್ರತಿಭೆಗಳಿಗೆ ಸಂಗೀತ ಪಾಠವನ್ನು ಹೇಳಲಿದ್ದಾರೆ.

ಇಂದು ಜೀ ವಾಹಿನಿ ತನ್ನ ಫೇಸ್ ಬುಕ್ ನಲ್ಲಿ ಹಳೆಯ ಎವರ್ ಗ್ರೀನ್ ಹಾಡುಗಳಿಗೆ ನ್ಯೂ ವರ್ಷನ್ ಹಾಡಿರುವ ವಿಡಿಯೋವನ್ನು ಅಪ್ಲೋಡ್ ಮಡಿಕೊಂಡಿದೆ. ವಿಶೇಷವೆಂದರೆ ಸರಿಗಮಪ ರಿಯಾಲಿಟಿ ಶೋನ ಹಳೆಯ ಆವೃತ್ತಿಯ ಜೂನಿಯರ್ ಮತ್ತು ಸೀನಿಯರ್ ಸ್ಪರ್ಧಿಗಳ ಸುಮಧುರ ಕಂಠದಲ್ಲಿ ಹಾಡು ಮೂಡಿದೆ. ವಿಡಿಯೋದಲ್ಲಿ ಇಂಪನಾ, ಅರವಿಂದ್, ಸಾನ್ವಿ ಶೆಟ್ಟಿ ಸೇರಿದಂತೆ ಹಲವರ ಕಂಠದಲ್ಲಿ ಹಾಡನ್ನು ಕೇಳಬಹುದು.

ಈಗಾಗಲೇ ಜೀ ವಾಹಿನಿಗೆ ಹಂಸಲೇಖ ಎಂಟ್ರಿ ಆಗುತ್ತಿರುವ ವಿಷಯವನ್ನು ಅಭಿಮಾನಿಗಳಿಗೆ ವಿಶೇಷ ಪ್ರೋಮೋಗಳ ಮೂಲಕ ತಿಳಿಸಿದೆ. ಈ ಆವೃತ್ತಿಯಲ್ಲಿ ರಾಜೇಶ್ ಕೃಷ್ಣಣ್ ವೈಯಕ್ತಿಕ ಕಾರಣಗಳಿಂದ ತೀರ್ಪುಗಾರರ ಸ್ಥಾನದಿಂದ ಹೊರ ಬಂದಿದ್ದು, ಅವರ ಗುರು ಹಂಸಲೇಖ ಮಹಾಗುರುಗಳಾಗಿ ಬಂದಿದ್ದಾರೆ. ಎಂದಿನಂತೆ ವಿಜಯ್ ಪ್ರಕಾಶ್ ಮತ್ತು ಅರ್ಜುನ್ಯ ಜನ್ಯ ತೀರ್ಪುಗಾರರಾಗಿ ಹಂಸಲೇಖ ಅವರಿಗೆ ಸಾಥ್ ನೀಡಲಿದ್ದಾರೆ. ಮಾತಿನ ಚಿನುಕುರುಳಿ ಅನುಶ್ರೀ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *