ಗುರಾಯಿಸಿದ್ದಕ್ಕೆ ದೊಣ್ಣೆ ಹಿಡಿದು ನಡುರಸ್ತೆಯಲ್ಲಿ ಹೊಡೆದಾಡಿದ ಯುವಕರು

Public TV
1 Min Read

ತುಮಕೂರು: ಕ್ಷುಲ್ಲಕ ವಿಚಾರಕ್ಕೆ ಯುವಕರ ಗುಂಪೊಂದು ದಾಂಧಲೆ ನಡೆಸಿದ ಘಟನೆ ತುಮಕೂರು ನಗರದ ರಿಂಗ್ ರಸ್ತೆಯಲ್ಲಿ ನಡೆದಿದೆ.

ರಿಂಗ್ ರಸ್ತೆಯ ಕ್ಲೌಡ್ 9 ಬಾರ್‌ನಲ್ಲಿ ಯುವಕರ ಗುಂಪು ಮದ್ಯವನ್ನು ಸೇವಿಸುತ್ತಿತ್ತು. ಈ ವೇಳೆ ಯುವಕನೊಬ್ಬ ಮದ್ಯ ಸೇವಸಿದ ಬಳಿಕ ಗುರಾಯಿಸಿದ್ದಾನೆ. ಇದನ್ನೆ ಕಾರಣವಾಗಿಟ್ಟುಕೊಂಡು ಯುವಕರ ಗುಂಪು ಗಲಾಟೆ ಮಾಡಲು ಆರಂಭ ಮಾಡಿದೆ. ಇದನ್ನೂ ಓದಿ: ನಾಗಪಂಚಮಿಯ ವಿಶೇಷ: ಬಾಯಲ್ಲಿಟ್ಟರೆ ಕರಗುವ ‘ಅಕ್ಕಿ ತಂಬಿಟ್ಟು’ ಮಾಡುವ ವಿಧಾನ

ದೊಣ್ಣೆ ಹಿಡಿದುಕೊಂಡು ನಡುರಸ್ತೆಗೆ ಯುವಕರು ಇಳಿದಿದ್ದು, ಗಲಾಟೆಯಲ್ಲಿ ಯುವಕನೊಬ್ಬನ ಮೇಲೆ ಹಲ್ಲೆಗೆ ಯತ್ನ ನಡೆದಿದೆ. ಸ್ಥಳೀಯರು ಈ ಕುರಿತು ಪೊಲೀಸರಿಗೆ ತಿಳಿಸಿದ ತಕ್ಷಣ ಪೊಲೀಸರು ಧಾವಿಸಿದ್ದು, ಕೆಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕುಡಿದು ದಾಂಧಲೆ ಹಿನ್ನೆಲೆ ಪೊಲೀಸರು ಪ್ರಕರಣ ದಾಖಲಿಸಿಗೊಂಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *