ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಭದ್ರಾ ಜಲಾಶಯ- ಅಪಾಯವನ್ನು ಲೆಕ್ಕಿಸದೆ ಯುವಕರ ಸೆಲ್ಫಿ ಕ್ರೇಜ್!

Public TV
1 Min Read

ಕೊಪ್ಪಳ: ಬಳ್ಳಾರಿ, ರಾಯಚೂರು ಜಿಲ್ಲೆಯ ಜೀವನಾಡಿಯಾದ ತುಂಗಭದ್ರಾ ಜಲಾಶಯ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಜಲಾಶಯದಿಂದ ಒಂದು ಲಕ್ಷ 59 ಸಾವಿರ ಕ್ಯೂಸೆಕ್ ನೀರು ಜಲಾಶಯದಿಂದ ಹರಿಯುತ್ತಿದೆ. ಆದರೆ ಯುವಕರು ಮಾತ್ರ ಅಪಾಯವನ್ನ ಲೆಕ್ಕಿಸದೆ ಸೆಲ್ಫಿ ಕಿಕ್ಕಿಸುವಲ್ಲಿ ತಲ್ಲೀನರಾಗಿದ್ದಾರೆ.

ತುಂಗಭದ್ರಾ ಜಲಾಶಯದ ಸುಮಾರು ಐವತ್ತು ವರ್ಷದ ಹಳೆಯ ಬ್ರಿಡ್ಜ್ ಮೇಲೆ ಹರಿಯುವ ನೀರಿನಲಿ ಅಪಾಯವನ್ನು ಲೆಕ್ಕಿಸಿದೆ ಜನತೆ ಮೋಜು ಮಸ್ತಿ ಮಾಡುತ್ತಿದ್ದಾರೆ. ಸ್ವಲ್ಪ ಹೆಚ್ಚು ಕಡಿಮೆಯಾದರೆ ಅಪಾಯ ಕಟ್ಟಿಟ್ಟ ಬುತ್ತಿ.

ಹೀಗಿರುವಾಗ ಜನ ಹಳೆಯ ಬ್ರಿಡ್ಜ್ ಮೇಲೆ ನಿಂತು ಜನ ಫೋಟೋಗೆ ಪೋಸ್ ಕೊಡುತ್ತಾರೆ. ಭದ್ರತೆ ಇಲ್ಲದ ಕಾರಣ ಜಲಾಶಯ ನೋಡಲು ಬಂದ ಜನ ಅಪಾಯವನ್ನ ಲೆಕ್ಕಿಸದೆ ಎಂಜಾಯ್ ಮಾಡುತ್ತಿದಾರೆ. ಬ್ಯಾರಿಕೇಡ್ ಹಾಕಿದ್ದರೂ ಯಾವದೇ ಪೊಲೀಸರಿಲ್ಲದ ಕಾರಣ ಜನ ಮೋಜು ಮಸ್ತಿಯಲ್ಲಿ ತೊಡಗಿರೋದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅಪಾಯ ಸಂಭವಿಸೋ ಮುನ್ನ ಜಿಲ್ಲಾಡಳಿತ ಸೂಕ್ತ ಭದ್ರತೆ ನೀಡಬೇಕು ಎಂದು ಜನ ಆಗ್ರಹಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *