ಮೋದಿ ಪರ ಘೋಷಣೆ ಕೂಗಿದ್ದಕ್ಕೆ ಕಾರಿಂದಿಳಿದು ರಾಹುಲ್ ಜಿಂದಾಬಾದ್ ಅಂದ್ರು ಬೇಳೂರು!

Public TV
1 Min Read

ಶಿವಮೊಗ್ಗ: ಲೋಕಸಭಾ ಚುನಾವಣೆ ಮುಗಿದರೂ ಮೋದಿ ಘೋಷಣೆಯ ಅಬ್ಬರ ಮುಗಿಯಲಿಲ್ಲ. ಸಾಗರದಲ್ಲಿ ಕಾಂಗ್ರೆಸ್ ಮುಖಂಡ ಕಾರಿಗೆ ಅಡ್ಡ ಹಾಕಿ ಮೋದಿ ಎಂದು ಘೋಷಣೆ ಕೂಗಲಾಗಿದೆ.

ಶುಕ್ರವಾರ ರಾತ್ರಿ ಸಾಗರದ ಅಣಲೆಕೊಪ್ಪ ಬಡಾವಣೆಯಲ್ಲಿ ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ಕಾರಿಗೆ ಅಡ್ಡಹಾಕಿ ಮೋದಿ ಮೋದಿ ಎಂದು ಘೋಷಣೆ ಕೂಗಲಾಗಿತ್ತು. ಈ ವೇಳೆ ಬೇಳೂರು ಗೋಪಾಲಕೃಷ್ಣ ಕಾರಿಂದ ಇಳಿದು, ರಾಹುಲ್ ಜಿಂದಾಬಾದ್, ಕಾಂಗ್ರೆಸ್ ಪಾರ್ಟಿಗೆ ಜೈ ಎಂದು ಘೋಷಣೆ ಕೂಗಿದ್ದಾರೆ.

ಗೋಪಾಲಕೃಷ್ಣ ಅವರು ರಾಹುಲ್ ಜಿಂದಾಬಾದ್ ಹೇಳುತ್ತಿದ್ದಂತೆ ಮೋದಿ ಪರ ಘೋಷಣೆ ಇನ್ನಷ್ಟು ಜಾಸ್ತಿ ಆಗಿದೆ. ಘೋಷಣೆ ಜಾಸ್ತಿ ಆಗುತ್ತಿದ್ದಂತೆ ಬೆಂಬಲಿಗರು ಬೇಳೂರು ಅವರನ್ನು ಒತ್ತಾಯದಿಂದ ಕಾರತ್ತಿಸಿದ್ದಾರೆ. ಬೇಳೂರು ಜೊತೆಗಿದ್ದವರ ಒತ್ತಾಯಕ್ಕೆ ಕಾರು ಹತ್ತಿ ತೆರಳಿದ್ದರು.

ಗೋಪಾಲಕೃಷ್ಣ ಅವರು ಹೋದ ಮೇಲೂ ಮುಂದುವರಿದ ಮೋದಿ ಮೋದಿ ಎಂಬ ಘೋಷಣೆ ಕೂಗಲಾಯಿತು.

Share This Article
Leave a Comment

Leave a Reply

Your email address will not be published. Required fields are marked *