ರಸ್ತೆ ದುರಸ್ಥಿಗಾಗಿ ರಾಜಕಾರಣಿಗಳ ಕಚೇರಿ ಅಲೆದು ಸುಸ್ತಾಗಿ ಹೊಸ ಪ್ಲ್ಯಾನ್ ಮಾಡಿದ್ರು ಹುಬ್ಬಳ್ಳಿ ಯುವಕರು

Public TV
1 Min Read

ಹುಬ್ಬಳ್ಳಿ: ಇಷ್ಟು ದಿನ ಜನ ನಮ್ಮ ಏರಿಯಾದಲ್ಲಿ ರಸ್ತೆ ಹದಗೆಟ್ಟಿದೆ, ಇದನ್ನ ರಿಪೇರಿ ಮಾಡಿ ಅಂತ ರಾಜಕಾರಣಿಗಳ ಮನೆ ಅಲೆದಾಡುತ್ತಿದ್ರು. ರಾಜಕಾರಣಿಗಳು ಸಹ ದುರಸ್ಥಿ ಮಾಡುವುದಾಗಿ ಆಶ್ವಾಸನೆ ಕೊಡ್ತಾನೆ ಬಂದಿದ್ದಾರೆ. ಆದ್ರೆ ಕಚೇರಿ ಅಲೆದು ಅಲೆದು ಸುಸ್ತಾದ ಯುವಕರು ಈಗ ಹೊಸ ಮಾರ್ಗ ಕಂಡುಕೊಂಡಿದ್ದಾರೆ.

ಹುಬ್ಬಳ್ಳಿ ರಸ್ತೆಯಲ್ಲಿ ಓಡಾಡಿದ ಜನರಿಗೆ ಗೊತ್ತು ಇಲ್ಲಿನ ರಸ್ತೆಯ ಪರಿಸ್ಥಿತಿ ಹೇಗಿದೆ ಎಂದು. ಅಧಿಕಾರಿಗಳಿಗೆ, ಶಾಸಕರು-ಸಚಿವರಿಗೆ ಎಷ್ಟೇ ಕೇಳಿಕೊಂಡ್ರೂ ರಸ್ತೆ ಮಾತ್ರ ಸರಿಹೋಗಿಲ್ಲ. ಅದಕ್ಕೆ ಜನ ರಸ್ತೆಗಳ ದುಃಸ್ಥಿತಿಯ ಬಗ್ಗೆ `ಹುಬ್ಬಳ್ಳಿ ರಸ್ತೆ ಕೆಟ್ಟಾವಸ್ಥೆ ಜಲ್ದಿ ಕಟ್ರೊ ನಮ್ಮೂರ ರಸ್ತೆ’ ಎಂಬ ವಿಡಂಬನಾತ್ಮಕ ಹಾಡು ರಚಿಸಿ ಸರ್ಕಾರಕ್ಕೆ ಛೀಮಾರಿ ಹಾಕಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಾಜಕಾರಣಿಗಳು ನಗರಕ್ಕೆ ತೋರಿದ ಅಸಡ್ಡೆಯ ಕುರಿತು 1.58 ನಿಮಿಷದ ವಿಡಿಯೊದಲ್ಲಿ ತೋರಿಸಲಾಗಿದೆ. ರೈಲ್ವೆ ಸ್ಟೇಷನ್ ರಸ್ತೆ, ಕೇಶ್ವಾಪುರ, ಕುಸುಗಲ್ ರಸ್ತೆಯಲ್ಲಿ ಚಲಿಸುವ ವಾಹನ ಸವಾರರ ಪರದಾಟ, ಗರ್ಭಿಣಿಯರು ಈ ರಸ್ತೆಗಳಲ್ಲಿ ಚಲಿಸಿದರೆ ಆಗುವ ದುರಂತ, ಕೆಟ್ಟು ನಿಲ್ಲುವ ವಾಹನಗಳ ಬಗ್ಗೆ ವಿಡಿಯೋದಲ್ಲಿ ಬೆಳಕು ಚೆಲ್ಲಿದ್ದಾರೆ.

ಹುಬ್ಬಳ್ಳಿಯ ಜವಾರಿ ಭಾಷೆಯಲ್ಲಿ ವಿಡಂಬನಾತ್ಮಕವಾಗಿ ಹಾಡು ರಚಿಸಿ, ಸಮಸ್ಯೆ ಗಂಭೀರತೆಯನ್ನು ವಿಡಿಯೊದಲ್ಲಿ ತೋರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *