2,500 ರೂ. ವಾಪಸ್ ಕೊಡದಿದ್ದಕ್ಕೆ ಯುವಕನ ಕೈಯನ್ನೆ ಕತ್ತರಿಸಿದ್ರು

Public TV
1 Min Read

ಗಾಂಧೀನಗರ: 2,500 ರೂ. ಹಣವನ್ನು (Money) ವಾಪಸ್ ನೀಡದಿದ್ದಕ್ಕೆ ಮೂವರು ವ್ಯಕ್ತಿಗಳು ಸೇರಿ ಯುವಕನ (Youth) ಕೈಯನ್ನು (Hand) ಕತ್ತರಿಸಿದ ಘಟನೆ ಗುಜರಾತ್‍ನಲ್ಲಿ (Gujarat) ನಡೆದಿದೆ.

ಗುಜರಾತ್‍ನ ಅರಾವಳಿ ಜಿಲ್ಲೆಯ ಬಯಾದ್‍ನಲ್ಲಿ ಈ ಘಟನೆ ನಡೆದಿದ್ದು, ವಿಜಯ್ ಸಲಾತ್ ಗಾಯಗೊಂಡ ಯುವಕ ಎಂದು ಗುರುತಿಸಲಾಗಿದೆ. ಶೈಲೇಶ್ ಬರೋಟ್ ಎಂಬಾತನಿಂದ ವಿಜಯ್ 2,500 ರೂ. ಸಾಲ ಪಡೆದಿದ್ದ. ಆದರೆ ಅದನ್ನು ವಾಪಸ್ ನೀಡಿರಲಿಲ್ಲ. ಇದರಿಂದ ಶೈಲೇಶ್ ಹಣ ವಸೂಲಿ ಮಾಡಲು ಶಸ್ತ್ರ ಸಜ್ಜಿತನಾಗಿ ವಿಜಯ್ ಮನೆಗೆ ಬಂದಿದ್ದನು. ಶೈಲೇಶ್ ಜೊತೆಗೆ ಆತನ ತಂದೆ ಕಾನು ಹಾಗೂ ಸಹೋದರ ರವಿ ಬುರೋಟ್ ಬಂದಿದ್ದರು.

ಈ ವೇಳೆ ಶೈಲೇಶ್ ತಕ್ಷಣ ಹಣವನ್ನು ಮರುಕಳಿಸುವಂತೆ ತಿಳಿಸಿದ್ದಾನೆ. ಆದರೆ ವಿಜಯ್ ಬಳಿ ಅಷ್ಟೊಂದು ಹಣವಿಲ್ಲದ್ದರಿಂದ ವಾಪಸ್ ನೀಡಲು ಆಗಲಿಲ್ಲ. ಇದರಿಂದ ಕೋಪಗೊಂಡ ಶೈಲೇಶ್ ವಿಜಯ್‍ನ ಕೈಯನ್ನು ಕತ್ತರಿಸಿದ್ದಾನೆ. ನಂತರ ಆತನ ಕಾಲಿಗೆ ಕತ್ತಿಯಿಂದ ಹೊಡೆದಿದ್ದಾನೆ. ಘಟನೆ ನಂತರ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡಿದ್ದ ವಿಜಯ್‍ನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ವೈದ್ಯರು ಆತನನ್ನು ಅಹಮದಾಬಾದ್ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಗ್ರಾಮದ ಯುವಕನೊಂದಿಗೆ ಪ್ರೀತಿ – ಮಗಳನ್ನೇ ಕೊಚ್ಚಿ ಕೊಂದ ತಂದೆ

ಘಟನೆಗೆ ಸಂಬಂಧಿಸಿ ಆರೋಪಿ ಶೈಲೇಶ್, ಆತನ ತಂದೆ ಹಾಗೂ ಇತರರ ವಿರುದ್ಧ ದೂರು ದಾಖಲಾಗಿದೆ. ಈಗಾಗಲೇ ಶೈಲೇಶ್‍ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಮತ್ತಿಬ್ಬರು ತಲೆ ಮರೆಸಿಕೊಂಡಿದ್ದಾರೆ. ಇದನ್ನೂ ಓದಿ: ಪಟಾಕಿ ತಂದ ಆಪತ್ತು – ಮಕ್ಕಳ ಬಾಳಲ್ಲಿ ಕತ್ತಲೆ ತಂದ ಬೆಳಕಿನ ಹಬ್ಬ, 78 ಮಂದಿಗೆ ಗಾಯ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *