ಕುಡಿದ ಮತ್ತಲ್ಲಿ ಚರಂಡಿಗೆ ಬಿದ್ದ ಯುವಕ- ಗಂಟೆಗಟ್ಟಲೇ ಒದ್ದಾಡಿ ಅಲ್ಲೇ ನಿದ್ದೆ ಮಾಡ್ದ

Public TV
1 Min Read

ಚಿಕ್ಕಬಳ್ಳಾಪುರ: ಕುಡಿದ ಅಮಲಿನಲ್ಲಿ ಯುವಕನೊಬ್ಬ ಚರಂಡಿಗೆ ಬಿದ್ದು ಒದ್ದಾಡಿ, ಅಲ್ಲೇ ನಿದ್ದೆ ಮಾಡಿದ ಘಟನೆ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ನಿನ್ನೆ ರಾತ್ರಿ ನಡೆದಿಒದೆ.

ಹೌದು. ಪಾನಮತ್ತನಾದ ಯುವಕ ಕೆಲ ಗಂಟೆಗಳ ಕಾಲ ಚರಂಡಿಯಲ್ಲಿಯೇ ನಿದ್ದೆ ಮಾಡಿದ್ದಾನೆ. ರಾತ್ರಿ 10 ಗಂಟೆಯ ಸುಮಾರಿನಲ್ಲಿ ವಿದ್ಯುತ್ ಇಲ್ಲದ ವೇಳೆ ಯುವಕ ಆಯತಪ್ಪಿ ರಸ್ತೆ ಬದಿಯ ಚರಂಡಿಯಲ್ಲಿ ಬಿದ್ದಿದ್ದಾನೆ. ಕುಡಿದ ಅಮಲಿನಲ್ಲಿ ಮೇಲಕ್ಕೆ ಬರಲಾಗದೇ ಅಲ್ಲೆ ಕೆಲಕಾಲ ಮಲಗಿದ್ದಾನೆ. ಕೊನೆಗೆ ಸ್ಥಳೀಯರು ಯುವಕನನ್ನು ಮೇಲಕ್ಕೆ ಎತ್ತಿ ಕಳುಹಿಸಿದ್ದಾರೆ.

ಇನ್ನು ಚರಂಡಿಯ ಮೇಲ್ಛವಾಣಿಯನ್ನು ಕೇವಲ ಅರ್ಧಭಾಗ ಮುಚ್ಚಿರುವುದು ಘಟನೆಗೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಲಾದರೂ ಪುರಸಭೆ ಅಧಿಕಾರಿಗಳು ಸಮರ್ಪಕವಾಗಿ ಚರಂಡಿಯ ಮೇಲ್ಛಾವಣಿಯನ್ನು ಮುಚ್ಚಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *