ಪ್ರಾಣಕ್ಕೆ ಕಂಟಕವಾದ ಕೊಲೆ ಯತ್ನದ ಕೇಸ್- ಖಾಕಿ ಕಿರುಕುಳಕ್ಕೆ ಯುವಕ ಆತ್ಮಹತ್ಯೆ?

Public TV
1 Min Read

ಬೆಂಗಳೂರು: ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದು, ಇದೀಗ ಪೋಷಕರು ಪೊಲೀಸರ ವಿರುದ್ಧ ಆರೋಪ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಕಾರ್ತಿಕ್ (27) ಎಂಬ ಯುವಕ ಶನಿವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಣೆ. ಈ ವೇಳೆ ಪೋಷಕರು ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಿಸಿದ್ದಾರೆ. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ.

ಬೈಕ್ ಮ್ಯಾಕಾನಿಕ್ ಕೆಲಸ ಮಾಡುತ್ತಿದ್ದ ಮೃತ ಕಾರ್ತಿಕ್, ಕೊಲೆ ಯತ್ನದ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿ ಬಂದಿದ್ದನು. ಆ ಬಳಿಕ ಪೊಲೀಸರು ಆತನ ಮನೆ ಬಳಿ ಬಂದು ತೊಂದರೆ ಕೊಡುತ್ತಿದ್ದರು. ಪೊಲೀಸರ ಕಿರುಕುಳಕ್ಕೆ ಬೇಸತ್ತು ಕಾರ್ತಿಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಇದೀಗ ಆರೋಪ ಮಾಡುತ್ತಿದ್ದಾರೆ.

ಭಾರತೀನಗರ ಪೊಲೀಸರ ವಿರುದ್ಧ ಮೃತ ಯುವಕನ ಪೋಷಕರು ಈ ಆರೋಪವನ್ನು ಮಾಡುತ್ತಿದ್ದಾರೆ.

https://www.youtube.com/watch?v=i_CzCk_acbc

Share This Article
Leave a Comment

Leave a Reply

Your email address will not be published. Required fields are marked *