ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಯುವಕನಿಗೆ ಚಾಕು ಇರಿತ!

Public TV
1 Min Read

ಹಾವೇರಿ: ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಚೂರಿ ಇರಿತಕ್ಕೆ ಒಳಗಾಗಿದ್ದ ಯುವಕ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ನಡೆದಿದೆ.

ಅಮೀರ್ ವೀರಾಪುರ(25) ಮೃತ ಯುವಕ. ಮಂಗಳವಾರ ರಾತ್ರಿ ಚೂರಿ ಇರಿತಕ್ಕೆ ಒಳಗಾಗಿದ್ದ ಅಮೀರ್ ಚಿಕಿತ್ಸೆ ಫಲಿಸದೇ ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಸದ್ಯ ಅಮೀರ್ ಗೆ ಚೂರಿಯಿಂದ ಇರಿದಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ಅಮೀರ್ ವೀರಾಪುರ

ವಿನಾಯಕ ನುಗ್ಗಿಹಳ್ಳಿ(21) ಬಂಧಿತ ಆರೋಪಿ. ವಿನಾಯಕನಿಗೆ ಅಮೀರ್ ಮೇಲೆ ಹಳೆ ವೈಷಮ್ಯವಿತ್ತು. ಹೀಗಾಗಿ ನೀರು ಕೇಳುವ ನೆಪದಲ್ಲಿ ಅಮೀರ್ ಮನೆಗೆ ಬಂದಿದ್ದ ವಿನಾಯಕ ಈ ಕೃತ್ಯವನ್ನ ಎಸಗಿದ್ದಾನೆ.

ಈ ಸಂಬಂಧ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿನಾಯಕ ನುಗ್ಗಿಹಳ್ಳಿ
Share This Article
Leave a Comment

Leave a Reply

Your email address will not be published. Required fields are marked *