2 ಲಕ್ಷಕ್ಕಾಗಿ ಯುವಕನ ಕತ್ತು ಸೀಳಿದ!

Public TV
1 Min Read

ಮೃತ ಕಿಸಾನ್

– ಬಿಯರ್ ಅಂಗಡಿಗೆ ಕರ್ಕೊಂಡು ಹೋಗಿ ಕೊಲೆ

ಭುವನೇಶ್ವರ: ಸಾಲ ಮರುಪಾತಿಸಲಿಲ್ಲ ಎಂಬ ಕಾರಣಕ್ಕೆ ಬಿಯರ್ ಅಂಗಡಿಗೆ ಕರೆದುಕೊಂಡು ಹೋಗಿ ಯುವಕನನ್ನು ಕೊಲೆ ಮಾಡಿರುವ ಘಟನೆ ಒಡಿಶಾದ ಸೋನೆಪುರ್ ನ ಬಿಂಕಾದಲ್ಲಿ ನಡೆದಿದೆ.

ಮೃತನನ್ನು 28 ವರ್ಷದ ದುಷ್ಮಾಂತ್ ಕಿಸಾನ್ ಎಂದು ಗುರುತಿಸಲಾಗಿದೆ. ಈತ ಲಾಹುನಿಪದಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕುರ್ದಾದಲ್ಲಿರುವ ಕುಚಿಂಡಾದಲ್ಲಿ ವಾಸಿಸುತ್ತಿದ್ದನು. ಕಿಸಾನ್ ಬಿಂಕಾ ಫೈರ್ ಸ್ಟೇಷನ್‍ನಲ್ಲಿ ಕೆಲಸ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಕಿಸಾನ್ ಬಿಂಕಾದಲ್ಲಿನ ನಿವಾಸಿ ಟಿಕು ಅಸ್ಗರ್ ಬಳಿ 2 ಲಕ್ಷ ರೂ. ಸಾಲ ತೆಗೆದುಕೊಂಡಿದ್ದನು. ಆದರೆ ಸಾಲ ಪಡೆದು ಎರಡು ವರ್ಷಗಳು ಕಳೆದರೂ ಆ ಹಣವನ್ನು ಕಿಸಾನ್ ಮರುಪಾವತಿಸಲಿಲ್ಲ.

ಆರೋಪಿ ಅಸ್ಗರ್ ಪದೇ ಪದೇ ಹಣ ಕೊಡುವಂತೆ ಕಿಸಾನ್ ಬಳಿ ಕೇಳುತ್ತಿದ್ದನು. ಆದರೂ ಕಿಸಾನ್ ಹಣವನ್ನು ಹಿಂದಿರುಗಿಸಲಿಲ್ಲ. ಇದರಿಂದ ಕೋಪಗೊಂಡ ಅಸ್ಗರ್, ಕಿಸಾನ್‍ನನ್ನು ಬಿಯರ್ ಅಂಗಡಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಏಕಾಏಕಿ ಕತ್ತಿಯಿಂದ ಕಿಸಾನ್ ಕುತ್ತಿಗೆಗೆ ಚುಚ್ಚಿದ್ದಾನೆ. ಪರಿಣಾಮ ಕಿಸಾನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಕೊಲೆ ಮಾಡಿ ಆರೋಪಿ ಅಸ್ಗರ್ ಪೊಲೀಸರ ಮುಂದೆ ಶರಣಾಗಿದ್ದು, ತಾನು ಮಾಡಿದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಸದ್ಯಕ್ಕೆ ಪೊಲೀಸರು ಅಸ್ಗರ್ ನನ್ನು ಬಂಧಿಸಿದ್ದಾರೆ. ಇತ್ತ ಮರಣೋತ್ತರ ಪರೀಕ್ಷೆಗಾಗಿ ಕಿಸಾನ್ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *