ಪ್ರೇಯಸಿ ಕೈ ಕೊಟ್ಟಳೆಂದು ಮನನೊಂದು ಪ್ರೇಮಿ ಆತ್ಮಹತ್ಯೆ

Public TV
1 Min Read

ಚಿಕ್ಕಮಗಳೂರು: ಪ್ರೇಯಸಿ ಕೈ ಕೊಟ್ಟಳೆಂದು ಮನನೊಂದು ಪ್ರೇಮಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಬಳಿಯ ಹಿರೇಬೈಲ್‍ನಲ್ಲಿ ನಡೆದಿದೆ.

ಸತೀಶ್(29) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮೂಲತಃ ಬಸರಗಟ್ಟೆ ನಿವಾಸಿಯಾಗಿರುವ ಸತೀಶ್ ಹಿರೇಬೈಲ್‍ನಲ್ಲಿರುವ ತನ್ನ ಸಂಬಂಧಿಕರ ಮನೆಗೆ ಬಂದಿದ್ದನು. ಈ ವೇಳೆ ಪಕ್ಕದ ಮನೆಯಲ್ಲಿದ್ದ ಪಲ್ಲವಿ (ಹೆಸರು ಬದಲಾಯಿಸಲಾಗಿದೆ) ಮೇಲೆ ಪ್ರೀತಿಯಾಗಿ ಇಬ್ಬರು ಪರಸ್ಪರ 3 ವರ್ಷಗಳಿಂದ ಪ್ರೀತಿಸುತ್ತಿದ್ದರು.

ಸತೀಶ್, ಪಲ್ಲವಿಗೆ ನರ್ಸಿಂಗ್ ಕೂಡ ಓದಿಸುತ್ತಿದ್ದನು. ನರ್ಸಿಂಗ್ ಮುಗಿಸಿ ಪಲ್ಲವಿ ಬೇರೆ ಕಡೆ ಟ್ರೈನಿಂಗ್‍ಗೆ ಎಂದು ಹೋಗಿದ್ದಳು. ಈ ವೇಳೆ ಸತೀಶ್ ಆಕೆಗೆ ಕರೆ ಮಾಡಿದ್ದಾನೆ. ಆದರೆ ಪಲ್ಲವಿ ಕರೆ ಸ್ವೀಕರಿಸದ ಕಾರಣ ಸತೀಶ್ ಆಕೆ ನನ್ನನ್ನು ನಿರ್ಲಕ್ಷ್ಯಿಸುತ್ತಿದ್ದಾಳೆ. ಆಕೆ ಬೇರೆಯವರನ್ನು ಪ್ರೀತಿಸುತ್ತಿದ್ದಾಳೆ ಎಂದು ಸ್ವತಃ ಸತೀಶ್ ಈ ರೀತಿ ಯೋಚಿಸಿ ತನ್ನ ಸಂಬಂಧಿಕರ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊಬೈಲ್‍ನಲ್ಲಿ ಸ್ನೇಹಿತರಿಗೆ ಡೆತ್ ನೋಟ್ ಸಂದೇಶ ರವಾನಿಸಿ ಸತೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಡೆತ್‍ನೋಟ್‍ನಲ್ಲಿ ಸತೀಶ್, “ನನ್ನ ಸಾವಿಗೆ ಪಲ್ಲವಿನೇ (ಹೆಸರು ಬದಲಾಯಿಸಲಾಗಿದೆ) ಕಾರಣ. ದಯವಿಟ್ಟು ಇವಳಿಗೆ ತಕ್ಕ ಶಿಕ್ಷೆ ಆಗಲೇಬೇಕು. ನಮ್ಮ ಮನೆಯವರಿಗೆ ಏನು ಹೇಳಿಲ್ಲ. ದಯವಿಟ್ಟು ಎಲ್ಲಾ ವಿಷಯವನ್ನು ಹೇಳಿ. ಹೀರೆಬೈಲ್‍ನಲ್ಲಿ ಸೂಸೈಡ್ ಮಾಡಿಕೊಳ್ಳುತ್ತೀನಿ. 3 ವರ್ಷ ಪಲ್ಲವಿಗೆ ನರ್ಸಿಂಗ್ ಮಾಡಿಸಿದೆ ಎಂದು ಬರೆದುಕೊಂಡಿದ್ದಾನೆ.

ಈ ಬಗ್ಗೆ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *