ಪ್ರೀತಿಸದಿದ್ದರೆ ಕೊಲೆ ಮಾಡ್ತೀನಿ ಅಂತ ಹೇಳಿ ಪ್ರೇಯಸಿಯನ್ನು ಕೊಂದೇಬಿಟ್ಟ!

Public TV
1 Min Read

ಹೈದರಾಬಾದ್: ತನ್ನನ್ನು ಪ್ರೀತಿಸಲು ನಿರಾಕರಿಸಿದ್ದಕ್ಕೆ ಯುವಕನೊಬ್ಬ ತನ್ನ ಪ್ರೇಯಸಿಯನ್ನೇ ಕೊಲೆ ಮಾಡಿದ ಘಟನೆ ಸೋಮವಾರ ಆಂಧ್ರ ಪ್ರದೇಶದ ಹೈದರಾಬಾದ್‍ನಲ್ಲಿರುವ ಯೂಸಫ್‍ಗೂಡಾದಲ್ಲಿ ನಡೆದಿದೆ.

ವೆಂಕಟಾ ಲಕ್ಷ್ಮೀ(19) ಕೊಲೆಯಾದ ಯುವತಿ. ಸಾಗರ್ ಎಂಬ ಯುವಕ ಲಕ್ಷ್ಮೀಯನ್ನು ಪ್ರೀತಿಸುತ್ತಿದ್ದನು. ಅಲ್ಲದೇ ತನ್ನನ್ನು ಪ್ರೀತಿಸುವಂತೆ ಆತ ಲಕ್ಷ್ಮೀಯನ್ನು ದಿನನಿತ್ಯ ಪೀಡಿಸುತ್ತಿದ್ದನು. ಆದರೆ ಲಕ್ಷ್ಮೀ ಆತನ ಪ್ರೀತಿಯನ್ನು ನಿರಾಕರಿಸಿದ್ದಳು. ಇದರಿಂದ ಸಿಟ್ಟಿಗೆದ್ದ ಸಾಗರ್ ಆಕೆಯನ್ನು ಕೊಲೆ ಮಾಡಿದ್ದಾನೆ.

ವೆಂಕಟಾ ಲಕ್ಷ್ಮೀ 10 ವರ್ಷದಿಂದ ಹೈದರಾಬಾದ್ ನಲ್ಲೇ ವಾಸಿಸುತ್ತಿದ್ದಳು. ಸೋಮವಾರ ಸಂಜೆ ಸುಮಾರು 5.30ಕ್ಕೆ ಚಿನ್ನ ಖರೀದಿಸಲು ಚಿನ್ನದ ಅಂಗಡಿಗೆ ಹೋದಾಗ ಸಾಗರ್ ಆಕೆಯನ್ನು ಕೊಲೆ ಮಾಡಿದ್ದಾನೆ.

ಲಕ್ಷ್ಮೀ ಜೋರಾಗಿ ಕಿರುಚುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಓಡಿ ಬಂದರು. ಆಗ ಲಕ್ಷ್ಮೀ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಳು. ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಕರೆ ಮಾಡಿದ್ದರು. ವಿಷಯ ತಿಳಿದ ಪೊಲೀಸರು ತಕ್ಷಣ ಘಟನಾ ಸ್ಥಳಕ್ಕೆ ತಲುಪಿದ್ದರು.

ಸಾಗರ್ ಲಕ್ಷ್ಮೀಯನ್ನು ಕೊಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆತನನ್ನು ಹಿಡಿಯಲು ಪೊಲೀಸರು 6 ತಂಡ ರಚಿಸಿತ್ತು. ಸದ್ಯ ಪೊಲೀಸರು ಸಾಗರ್ ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *