ಶಾಲೆಯಲ್ಲಿ ವರ್ಗಾವಣೆ ಪತ್ರ ತರಲು ಹೋಗಿದ್ದ ವೇಳೆ ಬಾಲಕಿ ಕಿಡ್ನಾಪ್!

Public TV
0 Min Read

ಮೈಸೂರು: ಸಿನಿಮೀಯ ರೀತಿಯಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿದ ಘಟನೆ ಮೈಸೂರು ತಾಲುಕಿನ ಜೆಟ್ಟಿಹುಂಡಿಯಲ್ಲಿ ನಡೆದಿದೆ.

ಪ್ರಕಾಶ್ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿದ ಯುವಕ. ಬಾಲಕಿ ಹತ್ತನೇ ತರಗತಿ ಓದುತ್ತಿದ್ದು, ಶಾಲೆಯಲ್ಲಿ ವರ್ಗಾವಣೆ ಪತ್ರ ತರಲು ಹೋಗಿದ್ದ ವೇಳೆ ಅಪಹರಣ ನಡೆದಿದೆ. ನಾಲ್ವರು ಯುವಕರ ತಂಡ ಈ ಕೃತ್ಯ ಎಸಗಿದೆ.

ಮೂರು ದಿನಗಳ ಹಿಂದೆ ಬಾಲಕಿಯ ಅಪಹರಣವಾಗಿದ್ದು, ಇನ್ನೂ ಬಾಲಕಿ ಪತ್ತೆಯಾಗಿಲ್ಲ. ಸದ್ಯ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಇಲವಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *