ನದಿ ಪ್ರವಾಹದಲ್ಲಿ ಯುವಕರ ಹುಚ್ಚು ಸಾಹಸ

Public TV
1 Min Read

ಮಂಗಳೂರು: ರಾಜ್ಯದ ಬಹುತೇಕ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ನೇತ್ರಾವತಿ ನದಿ ಸಹ ತುಂಬಿ ಹರಿಯುತ್ತಿದ್ದು, ಕೆಲ ಯುವಕರು ಸೇತುವೆ ಮೇಲಿಂದ ಜಿಗಿಯುವ ಮೂಲಕ ತಮ್ಮ ಹುಚ್ಚಾಟವನ್ನು ಪ್ರದರ್ಶಿಸುತ್ತಿದ್ದಾರೆ.

ಬಂಟ್ವಾಳದ ಪಾಣೆಮಂಗಳೂರಿನಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಎದುರೇ ಸೇತುವೆ ಮೇಲಿಂದ ನದಿಗೆ ಜಿಗಿದು ಯುವಕರು ಈಜಾಡುತ್ತಿದ್ದಾರೆ. ಯುವಕರ ಹುಚ್ಚು ಸಾಹಸ ನೋಡಲು ಸ್ಥಳದಲ್ಲಿ ಜನ ಜಾತ್ರೆಯ ರೀತಿಯಲ್ಲಿ ಸೇರಿದ್ದಾರೆ.

ಕೆಲವು ದಿನಗಳ ಹಿಂದೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗದ್ದಗಿ ಗ್ರಾಮದ ಯುವಕರು ತುಂಬಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಈಜುವ ಸ್ಪರ್ಧೆ ನಡೆಸಿದ್ದರು. ಗಂಗಮ್ಮನ ಕಟ್ಟೆಯಿಂದ ಸಾಯಿ ಬಾಬಾ ಮಂದಿರದವರೆಗೆ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯ ಕೃಷ್ಣ ನದಿ ಬಲ ಮತ್ತು ಎಡದಂಡೆಯ ಗ್ರಾಮದ 8-10 ಯುವಕರು ಈಜಿದ್ದರು. 5-10 ಸಾವಿರ ರೂ. ಹಾಗೂ ಕುರಿಮರಿಗಾಗಿ 3 ಕಿ.ಮೀ. ಈಜಲು ಬೆಟ್ಟಿಂಗ್ ಕಟ್ಟಿಕೊಂಡಿದ್ದರು. ಪ್ರವಾಹದಲ್ಲಿ ಈಜಿ ದಂಡ ಸೇರಲು ಹರಸಾಹಸವೇ ಪಟ್ಟಿದ್ದರು.

Share This Article
Leave a Comment

Leave a Reply

Your email address will not be published. Required fields are marked *