ಸಿನಿಮಾ ಸ್ಟೈಲ್‍ನಲ್ಲಿ ಗಜರಾಜನಿಗೆ ಮುತ್ತು ಕೊಡಲು ಹೋಗಿ ಆಸ್ಪತ್ರೆ ಸೇರಿದ!

Public TV
1 Min Read

ಕೋಲಾರ: ರಾಕಿಂಗ್ ಸ್ಟಾರ್ ಯಶ್ ಗಜಕೇಸರಿ ಸಿನಿಮಾದಲ್ಲಿ ಆನೆಗೆ ಮುತ್ತುಕೊಟ್ಟ ಹಾಗೆ ಕಾಡಾನೆಯೊಂದಕ್ಕೆ ಯುವಕನೊಬ್ಬ ಮುತ್ತಿಡಲು ಹೋಗಿ ಆಸ್ಪತ್ರೆ ಪಾಲಾದ ಘಟನೆ ಜಿಲ್ಲೆಯ ಮಾಲೂರಿನ ಅರಳೇರಿ ಗ್ರಾಮದಲ್ಲಿ ನಡೆದಿದೆ.

ಗ್ರಾಮಕ್ಕೆ ನುಗ್ಗಿದ್ದ ಕಾಡಾನೆ ಹಿಂಡನ್ನು ಹಿಂಬಾಲಿಸಿ ಸಿನಿಮಾ ಸ್ಟೈಲ್ ಆನೆಗೆ ಮುತ್ತು ಕೂಡಲು ಅರಳೇರಿ ಗ್ರಾಮದ ನಿವಾಸಿ ರಾಜು ಹೋಗಿದ್ದಾನೆ. ಹಾಗೆಯೇ ಆನೆಗೆ ಮುತ್ತು ಕೊಡುತ್ತೇನೆ ಎಂದು ಸಾರ್ವಜನಿಕರಿಗೆ ರಾಜು ಸವಾಲು ಕೂಡ ಹಾಕಿದ್ದ. ಆದ್ರೆ ಏನೋ ಮಾಡಲು ಹೋಗಿ ಅದೇನೋ ಆಯ್ತು ಎನ್ನುವ ರೀತಿ ಮುತ್ತು ಕೊಡಲು ಹೋಗಿದ್ದವನಿಗೆ ಆನೆ ದಂತದಿಂದ ತಿವಿದು ತೀವ್ರ ಗಾಯಗೊಳಿಸಿದೆ.

ಇಂದು ಬೆಳಗ್ಗೆಯಿಂದ ಏಳು ಆನೆಗಳ ಹಿಂಡು ಗ್ರಾಮದ ಬಳಿ ಬೀಡು ಬಿಟ್ಟಿತ್ತು. ಗ್ರಾಮಸ್ಥರು ಈ ಆನೆಗಳ ಹಿಂಡು ಕಂಡು ಆತಂಕಕ್ಕಿಡಾಗಿದ್ದರು. ಆದ್ರೆ ಈ ವೇಳೆ ಆನೆಗೆ ಮುತ್ತು ಕೊಡುತ್ತೇನೆ ರಾಜು ಗ್ರಾಮಸ್ಥರಿಗೆ ಸವಾಲು ಹಾಕಿ ಹೋಗಿದ್ದಾನೆ. “ನೀವೆಲ್ಲ ನಿಂತುಕೊಂಡು ನೋಡ್ತಿದ್ದೀರಿ, ನೋಡಿ ನಾನು ಏನು ಮಾಡ್ತೀನಿ” ಅಂತ ಕಾಡಾನೆ ಹಿಂಡಿನ ಬಳಿ ರಾಜು ತೆರಳಿದ್ದಾನೆ. ಮುತ್ತು ಕೊಡಲು ಬಂದ ರಾಜುಗೆ ಆನೆ ತನ್ನ ವರಸೆಯನ್ನು ತೋರಿಸಿದ್ದು, ತನ್ನ ಬಳಿ ಬಂದಾಗ ದಂತದಿಂದ ಆತನ ತಲೆ ಭಾಗಕ್ಕೆ ತಿವಿದು ಹಲ್ಲೆ ನಡೆಸಿದೆ.

ಆನೆ ತಿವಿದ ಹಿನ್ನಲೆ ರಾಜು ಸ್ಥಳದಲ್ಲೇ ಪ್ರಜ್ಞೆ ತಪ್ಪಿದ್ದಾನೆ. ಬಳಿಕ ರಾಜುನನ್ನು ಕೋಲಾರ ಅಸ್ಪತ್ರೆಗೆ ಗ್ರಾಮಸ್ಥರು ದಾಖಲಿಸಿದ್ದಾರೆ. ಇನ್ನೂ ಕೂಡ ಗ್ರಾಮದ ನೀಲಗಿರಿ ತೋಪಿನಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.

Share This Article
Leave a Comment

Leave a Reply

Your email address will not be published. Required fields are marked *