ನಿಜವಾದ ಪ್ರೀತಿ ಎಂದಿಗೂ ಅಂತ್ಯವಾಗಲ್ಲ ಎಂದು ಪೋಸ್ಟ್ ಹಾಕಿ ಯುವಕ ಆತ್ಮಹತ್ಯೆ

Public TV
1 Min Read

ಮುಂಬೈ: ನಿಜವಾದ ಪ್ರೀತಿ ಎಂದಿಗೂ ಅಂತ್ಯವಾಗಲ್ಲ ಎಂದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿ ಯುವಕ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಸಮೀರ್ ಏಕನಾಥ್ ಭಾಸೆ(25) ಆತ್ಮಹತ್ಯೆ ಮಾಡಿಕೊಂಡ ಯುವಕ. ಸಮೀರ್ ತನ್ನ ಫೇಸ್‍ಬುಕ್ ಪೋಸ್ಟ್ ನಲ್ಲಿ, ನಿಜವಾದ ಪ್ರೀತಿ ಎಂದಿಗೂ ಅಂತ್ಯವಾಗಲ್ಲ, ಪ್ರೀತಿ ಎಂದಿಗೂ ಕೊನೆ ಆಗುವುದಿಲ್ಲ ಎಂದು ಬರೆದಿದ್ದಾನೆ. ಅಲ್ಲದೆ ಪೋಸ್ಟ್ ನಲ್ಲಿ ಚಾಕ್ಲೇಟ್, ಕೇಕ್ ಹಾಗೂ ಉಂಗುರದ ಫೋಟೋಗಳನ್ನು ಹಂಚಿಕೊಂಡಿದ್ದಾನೆ.

ಪೊಲೀಸರ ಪ್ರಕಾರ ಸಮೀರ್ ಮೃತಪಟ್ಟ ಜಾಗದಲ್ಲಿ ಡೆತ್‍ನೋಟ್ ಪತ್ತೆಯಾಗಿದೆ. ಸಮೀರ್ ತನ್ನ ಇನ್‍ಸ್ಟಾದಲ್ಲೂ ಕೊನೆಯ ಸಂದೇಶವನ್ನು ಪೋಸ್ಟ್ ಮಾಡಿದ್ದಾನೆ. ಸದ್ಯ ಪೊಲೀಸರು ಈ ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದು, ಪ್ರೀತಿಯಲ್ಲಿ ವಿಫಲವಾಗಿದ್ದಕ್ಕೆ ಸಮೀರ್ ಈ ನಿರ್ಧಾರ ತೆಗೆದುಕೊಂಡಿದ್ದಾನೆ ಎಂದು ಹೇಳುತ್ತಿದ್ದಾರೆ.

ಡೆತ್‍ನೋಟ್‍ನಲ್ಲಿ ಸಮೀರ್, ನನ್ನ ಸಾವಿಗೆ ಯಾರನ್ನು ಹೊಣೆಯಾಗಿ ಮಾಡಬೇಡಿ. ನಾನು ನನ್ನ ಇಚ್ಛಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಜೀವನ ಕೊನೆ ಮಾಡಲು ನನಗೆ ಯಾರು ಪ್ರೇರಿಪಿಸಿಲ್ಲ. ಇದು ನನ್ನ ನಿರ್ಧಾರ. ಅಮ್ಮ ಹಾಗೂ ತಾತ ನನ್ನನ್ನು ದಯವಿಟ್ಟು ಕ್ಷಮಿಸಿಬಿಡಿ. ನಾನು ನಿಮ್ಮನ್ನೆಲ್ಲಾ ಬಿಟ್ಟು ಹೋಗುತ್ತಿದ್ದೇನೆ ಎಂದು ಬರೆದಿದ್ದಾನೆ.

ಭಾನುವಾರ ಬೆಳಗ್ಗೆ ಸಮೀರ್ ಯಾರಿಗೂ ಹೇಳದೆ ಮನೆಯಿಂದ ಹೊರ ಹೋಗಿದ್ದನು. ಬಳಿಕ ಇಂದ್ರಯಾನಿ ನದಿಗೆ ಹಾರಿದನು. ಅಲ್ಲಿದ್ದ ಸ್ಥಳೀಯರು ಸಮೀರ್ ನದಿಗೆ ಹಾರಿದನ್ನು ನೋಡಿ ಆತನನ್ನು ರಕ್ಷಿಸಲು ಪ್ರಯತ್ನಿಸಿದ್ದರು. ಆದರೆ ಆತನನ್ನು ರಕ್ಷಿಸಲು ಆಗಲಿಲ್ಲ. ಬಳಿಕ ಅವರು ಎನ್‍ಡಿಆರ್‍ಎಫ್‍ಗೆ ಮಾಹಿತಿ ನೀಡಿದರು. 6 ಗಂಟೆಗಳ ಕಠಿಣ ಪರಿಶ್ರಮದಿಂದ ಸಮೀರ್ ಮೃತದೇಹವನ್ನು ಹೊರತರಲಾಯಿತು.

Share This Article
Leave a Comment

Leave a Reply

Your email address will not be published. Required fields are marked *