ಸತತ ನಾಲ್ಕನೇ ಪ್ರಯತ್ನದಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವಕ

Public TV
1 Min Read

ಬೆಂಗಳೂರು: ವಿವಿ ಪುರಂ ಚರ್ಚ್ ವೊಂದರ ಮೇಲೆ ಯುವಕನೊಬ್ಬ ವಿಚಿತ್ರವಾಗಿ ಸಾವನ್ನಪ್ಪಿದ್ದಾನೆ. ಸಾಯಲು ಸತತ 4 ಗಂಟೆ ಕಾಲ 3 ಬಾರಿ ಭಿನ್ನ ವಿಭಿನ್ನ ರೀತಿಯಲ್ಲಿ ಯತ್ನಿಸಿ, 4ನೇ ಬಾರಿಗೆ ಯಮನ ಪಾದ ಸೇರಿದ್ದಾನೆ.

ಮೊದಲು ನೇಣು ಬಿಗಿದುಕೊಳ್ಳಲು ಹೋಗಿ ನೆಲದ ಮೇಲೆ ಬಿದ್ದು ಅಲ್ಲೇ ಇದ್ದು ಗಾಜಿನ ಪೀಸುಗಳಿಂದ ಗಾಯಗೊಂಡಿದ್ದಾನೆ. ನಂತರ ಗಾಜಿನ ಪೀಸಿನಿಂದ ಹೊಟ್ಟೆಗೆ ಇರಿದುಕೊಂಡಿದ್ದಾನೆ. ಬಳಿಕ ರಕ್ತಸ್ರಾವದ ನಡುವೆ 2 ಗಂಟೆ ಕಾಲ ಚರ್ಚ್ ಮೇಲೆ ಓಡಾಡಿದ ಯುವಕ 3ನೇ ಬಾರಿಗೆ ಮೊನಚಾದ ಟೈಲ್ಸ್ ನಿಂದ ಇರಿದುಕೊಂಡು ಅದೇ ರಕ್ತದಲ್ಲಿ ಮಲೆಯಾಳಂ ಭಾಷೆಯಲ್ಲಿ ಹುಡುಗಿಯೊಬ್ಬಳ ಹೆಸರು ಬರೆದಿದ್ದಾನೆ.

ಆಗಲೂ ಸಾವನ್ನಪ್ಪದಿದ್ದಾಗ ತನ್ನ ಶರ್ಟ್ ನಿಂದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾಯೋದಕ್ಕೆ ಚರ್ಚ್ ಮೇಲೇಕೆ ಬಂದ..? ಯಾರಾದರೂ ಕೊಲೆ ಮಾಡಿ ಮಾಡಿದ್ರಾ..? ಹುಡುಗಿ ವಿಚಾರಕ್ಕೋಸ್ಕರ ಹೀಗೆ ಮಾಡಿಕೊಂಡನಾ..? ಕೊಲೆಯೋ ಆತ್ಮಹತ್ಯೆಯೋ..? ಅನ್ನೋ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು ಈ ಸಂಬಂಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *